Site icon Vistara News

ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ: ಬಿಬಿಎಂಪಿ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆರ್ಡರ್‌

chamarajpet ground

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ಸಂಬಂಧಿತ ಮಹತ್ವದ ದಾಖಲೆಗಳನ್ನು ವಕ್ಫ್‌ ಬೋರ್ಡ್ ಸಲ್ಲಿಸದ ಹಿನ್ನೆಲೆಯಲ್ಲಿ ಮೈದಾನ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಆದೇಶ ಹೊರಡಿಸಿರುವ ಬಿಬಿಎಂಪಿ, ಸಂಪೂರ್ಣ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದೆ.

ಮೈದಾನ ನಮಗೆ ಸೇರಿದ್ದು, ಖಾತೆ ಮಾಡಿಕೊಡಬೇಕು ಎಂದು ವಕ್ಫ್‌ ಬೋರ್ಡ್‌ ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ಆ ಬಳಿಕ ಅರ್ಜಿ‌ ಪರಿಶೀಲನೆ ನಡೆಸಿದ ಬಿಬಿಎಂಪಿ ಇನ್ನೂ ಹೆಚ್ಚುವರಿ ದಾಖಲೆಗಳನ್ನು ಪ್ರಸ್ತುತ ಪಡಿಸುವಂತೆ ವಕ್ಫ್‌ ಬೋರ್ಡ್‌ಗೆ ನೋಟಿಸ್‌ ನೀಡಿ 45 ದಿನಗಳ ಕಾಲಾವಧಿ ನೀಡಿತ್ತು. ಬಿಬಿಎಂಪಿ ನೀಡಿದ್ದ ಕಾಲಾವಧಿ ಅಗಸ್ಟ್‌ 3ಕ್ಕೆ ಮುಗಿದ ಹಿನ್ನೆಲೆಯಲ್ಲಿ ಅಂತಿಮ ಹಂತದ ಪ್ರಕ್ರಿಯೆ ಮುಗಿಸಿದ್ದ ಬಿಬಿಎಂಪಿ ವಲಯ ಜಂಟಿ ಆಯುಕ್ತ ಶ್ರೀನಿವಾಸ್, ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ ಎಂದು ಆದೇಶ ನೀಡಿದ್ದಾರೆ.

ವಕ್ಫ್ ಬೋರ್ಡ್‌ ಅರ್ಜಿ ತಿರಸ್ಕರಿಸಲು ಬಿಬಿಎಂಪಿ ನೀಡಿದ ಮೂರು ಕಾರಣಗಳು

  1. ಚಾಮರಾಜಪೇಟೆ ಮೈದಾನವು ಬೆಂಗಳೂರು ದಕ್ಷಿಣ ತಾಲೂಕು ಗುಟ್ಟಹಳ್ಳಿಯ ಸರ್ವೆ 40ರ ಭಾಗಶಃ ಆಸ್ತಿ.
    ಚಾಮರಾಜಪೇಟೆ ಬಡಾವಣೆಯಾದಾಗ‌ ಇದು ನಗರ ವ್ಯಾಪ್ತಿಗೆ ಸೇರಿದೆ‌ ಮತ್ತು ಚೆಕ್ಕುಬಂದಿಯ ಬಗ್ಗೆ ವಿವಾದಗಳಿಲ್ಲ.
  2. ನ್ಯಾಯಾಲಯದಲ್ಲಿ ಪ್ರಾರ್ಥನೆ ನಿಷೇಧದ ಕುರಿತು ಮಾತ್ರ ವಾದಗಳಾಗಿವೆ. 1964ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಮುಸ್ಲಿಮರು ಮೈದಾನದಲ್ಲಿ ಸಾಂದರ್ಭಿಕ ಸಾಮೂಹಿಕ ಪ್ರಾರ್ಥನೆ ಹಕ್ಕು‌ ಮಾತ್ರ ಪಡೆದಿದ್ದಾರೆ, ಮಾಲೀಕತ್ವವಲ್ಲ.
  3. ಮೈದಾನ ಕುರಿತು ಕೋರ್ಟ್‌ನಲ್ಲಿ ಮುಸ್ಲಿಮರು ಪ್ರಾರ್ಥನಾ ಹಕ್ಕು ಮಾತ್ರ ಮಂಡಿಸಿದ್ದಾರೆ, ಮಾಲೀಕತ್ವದ ಹಕ್ಕು ಮಂಡಿಸಿಲ್ಲ. ಸುಪ್ರೀಂ ತೀರ್ಪಿನ ಪ್ರಕಾರ ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ 36 ರ ಅನ್ವಯ ಮೈದಾನವು ಸರ್ಕಾರದ ಸ್ವತ್ತು ಎಂದು ಪರಿಗಣಿಸಬಹುದು.

    ಇದನ್ನೂ ಓದಿ | ಕಾಂಗ್ರೆಸ್ ಪ್ರತಿಭಟನೆ ಹಿಂದೆ ಬಿಬಿಎಂಪಿ ಚುನಾವಣೆ ಮುಂದೂಡುವ ಷಡ್ಯಂತ್ರ: ಬಿಜೆಪಿ ಮುಖಂಡರ ಆರೋಪ
Exit mobile version