Site icon Vistara News

Bear Attack | ಮೇವು ತರಲು ಹೋದ ರೈತನ ಮೇಲೆ ಕರಡಿ ದಾಳಿ; ಬೆಚ್ಚಿ ಬಿದ್ದ ಗ್ರಾಮಸ್ಥರು

Bear Attack in belagavi district

Bear Attack in belagavi district

ತುಮಕೂರು: ಇಲ್ಲಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ದಾಸೇನಹಳ್ಳಿಯಲ್ಲಿ ರೈತರೊಬ್ಬರ ಮೇಲೆ ಕರಡಿಯೊಂದು (Bear Attack) ದಾಳಿ ನಡೆಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಸೇನಹಳ್ಳಿ ಗ್ರಾಮದ ನಾಗರಾಜಪ್ಪ (54) ಕರಡಿ ದಾಳಿಗೊಳಗಾದವರು.

Bear Attack

ನಾಗರಾಜಪ್ಪ ಎಂದಿನಂತೆ ಮುಂಜಾನೆ ಜಾನುವಾರಗಳಿಗೆ ಮೇವು ತರಲೆಂದು ಹೊಲಕ್ಕೆ ತೆರಳಿದ್ದಾಗ ಏಕಾಏಕಿ ಬಂದ ಕರಡಿ ಮೈ ಮೇಲೆ ಎರಗಿದೆ. ಕೂಡಲೇ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆಗದೇ ಇದ್ದಾಗ, ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಕರಡಿ ಗಾಬರಿಗೊಂಡು ಓಡಿ ಹೋಗಿದೆ.

ನಾಗರಾಜಪ್ಪನ ಕಿರುಚಾಟ ಕೇಳುತ್ತಿದ್ದಂತೆ ಅಕ್ಕ ಪಕ್ಕದ ರೈತರು ಆಗಮಿಸಿದ್ದು, ಗಾಯಗೊಂಡಿದ್ದವರನ್ನು ಕೂಡಲೇ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿರತೆ, ಕಾಡಾನೆ ಹಾವಳಿ ಹೆಚ್ಚಾಗುತ್ತಿರುವಾಗಲೇ ಈಗ ಕರಡಿ ದಾಳಿ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.

ಇದನ್ನೂ ಓದಿ | Hassan Blast | ಮಿಕ್ಸಿ ಬಾಂಬರ್‌ ಬಳಿ ಕೆಜಿಗಟ್ಟಲೆ ಚಿನ್ನ, ಕೋಟಿ ಹಣ? ಕಿರಾತಕ ಮಾಡಿದ ವಿಡಿಯೋಗಳ ಅಸಲಿಯತ್ತು ಇಲ್ಲಿದೆ ನೋಡಿ!

Exit mobile version