Site icon Vistara News

Bear Attack | ಕೆರೆ ಬಳಿ ನೀರು ಕುಡಿಯಲು ಬಂದ ವ್ಯಕ್ತಿ ಮೇಲೆ ಕರಡಿ ದಾಳಿ; ಪ್ರಾಣಾಪಾಯದಿಂದ ಪಾರು

Bear Attack in belagavi district

Bear Attack in belagavi district

ಹಾವೇರಿ: ಇಲ್ಲಿನ ಹಾನಗಲ್ ತಾಲೂಕಿನ ಗುಡಗುಡಿ ಗ್ರಾಮದಲ್ಲಿ ಕೆರೆ ಬಳಿ ನೀರು ಕುಡಿಯಲು ಹೋಗಿದ್ದಾಗ ಹಿಂದಿನಿಂದ ಬಂದ ಕರಡಿಯು (Bear attack) ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದೆ. ರಾಜು ಫಕೀರಪ್ಪ (45) ಕರಡಿ ದಾಳಿಗೊಳಗಾದವರು.

Bear Attack

ರಾಜು ಭತ್ತದ ಫಸಲು ಕಾಯಲು ಗದ್ದೆಗೆ ಬಂದಿದ್ದರು. ಈ ವೇಳೆ ಬಾಯಾರಿಕೆ ಆಗಿದ್ದರಿಂದ ಸಮೀಪದ ಕೆರೆ ಬಳಿ ನೀರು ಕುಡಿಯಲು ಹೋಗಿದ್ದಾರೆ. ಈ ವೇಳೆ ಅದೆಲ್ಲಿಂದಲೋ ಬಂದ ಕರಡಿ ದಿಢೀರ್‌ ದಾಳಿ ನಡೆಸಿದೆ. ನೀರು ಕುಡಿಯಲು ಬಗ್ಗಿದಾಗ ತಲೆಯ ಮೇಲೆ ಕರಡಿ ದಾಳಿ ಮಾಡಿದ್ದು, ಇದರಿಂದಾಗಿ ಬಲಗಡೆ ಕೂದಲು ಸಮೇತ ಚರ್ಮ ಕಿತ್ತು ಬಂದಿದೆ.

ತೀವ್ರ ಗಾಯಗೊಂಡಿರುವ ರಾಜು ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾಡು ಪ್ರಾಣಿಗಳನ್ನು ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Elephant attack | ಚಾಮರಾಜನಗರದಲ್ಲಿ ರೈತನ ಮೇಲೆ ಕಾಡಾನೆ ದಾಳಿ; ರಾಮನಗರದಲ್ಲಿ ರೈತರ ಪ್ರತಿಭಟನೆ

Exit mobile version