Site icon Vistara News

Belagavi News | ಪತಿಯ ಸಾವಿನ ಸುದ್ದಿ ಕೇಳಿದ ಕ್ಷಣವೇ ಮೃತಪಟ್ಟ ಪತ್ನಿ

Belagavi News

ಬೆಳಗಾವಿ : ಪತಿಯ ಸಾವಿನ ಸುದ್ದಿ ಕೇಳಿ (Belagavi News) ಕ್ಷಣಾರ್ಧದಲ್ಲಿ ಪತ್ನಿಯೂ ಹೃದಯಾಘಾತವಾಗಿ ಗುರುವಾರ (ಸೆ.15) ಮೃತಪಟ್ಟಿದ್ದಾರೆ. ಸವದತ್ತಿ ತಾಲೂಕಿನ ‌ತಲ್ಲೂರ ಗ್ರಾಮದಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಬುಧವಾರ ತಡರಾತ್ರಿ ಅನಾರೋಗ್ಯದಿಂದ‌ ಬಾಬಣ್ಣ ಅಣ್ಣಿಗೇರಿ (78) ಮೃತಪಟ್ಟಿದ್ದರು. ಪತಿಯ ಸಾವಿನ ಸುದ್ದಿ ಕೇಳಿ ಕ್ಷಣಾರ್ಧದಲ್ಲಿ ಶಿವಬಸಮ್ಮ ಬಾಬಣ್ಣ ಅಣ್ಣಿಗೇರಿ (70) ಕೂಡ ನಿಧನ ಹೊಂದಿದ್ದಾರೆ. ಆರೋಗ್ಯವಾಗಿದ್ದ ಶಿವಬಸಮ್ಮ ಪತಿಯ ಸಾವಿನ ಸುದ್ದಿ ಕೇಳಿ ವಿಧಿವಶವಾಗಿದ್ದಾರೆ.

ವೃದ್ಧ ದಂಪತಿ ಅಗಲಿದುದರಿಂದ ಕುಟುಂಬಸ್ಥರು ಶೋಕಕ್ಕೆ ತುತ್ತಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಅಂತಿಮಯಾತ್ರೆ ಮೂಲಕ ಗ್ರಾಮದಲ್ಲಿ ಏಕಕಾಲಕ್ಕೆ ವೃದ್ಧ ದಂಪತಿಯ ಅಂತ್ಯಕ್ರಿಯೆಗೆ ಕುಟುಂಬ ನಿರ್ಧಾರ ಮಾಡಿದೆ.

ಇದನ್ನೂ ಓದಿ | ಸಾವಿನಲ್ಲೂ ಒಂದಾದ ವೃದ್ಧ ದಂಪತಿ, ಪತಿಯನ್ನೇ ಅನುಸರಿಸಿದ ಪತ್ನಿ

Exit mobile version