Site icon Vistara News

Murder Case: ಸಾಲಗಾರ ಪತಿಯನ್ನು ಚಟ್ಟಕ್ಕೇರಿಸಿದ ಪತ್ನಿ-ಅತ್ತೆ

murder case

ಬೆಳಗಾವಿ: ಬೆಳಗಾವಿಯ 48 ವರ್ಷದ ಪೀರನವಾಡಿ ನಿವಾಸಿ ವಿನಾಯಕ್ ಜಾಧವ (Murder Case) ಜುಲೈ 29ರಂದು ಭೀಕರ ಹತ್ಯೆಯಾಗಿದ್ದಾನೆ. ಈತನು ತನ್ನ ಸ್ವಂತ ಉಧ್ಯಮವೊಂದನ್ನು ನಡೆಸುತ್ತಿದ್ದು ಉದ್ಯಮದಲ್ಲಿ ನಷ್ಟ ಹಿನ್ನೆಲೆಯಲ್ಲಿ ವಿಪರೀತ ಸಾಲವನ್ನು ಮಾಡಿದ್ದ. ಸಾಲ ಹೆಚ್ಚಾಗಿ ಮನೆಯನ್ನು ಅಡಮಾನವಾಗಿ ಇಟ್ಟಿದ್ದ ಜಾಧವ್ ಸಾಲಗಾರರ ಕಾಟಕ್ಕೆ ಬೇಸತ್ತು ಮೂರು ವರ್ಷಗಳಿಂದ ಬೆಳಗಾವಿ ಬಿಟ್ಟು ಹೋಗಿದ್ದ.

ಜುಲೈ 29ರಂದು ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ವಿನಾಯಕ, ಪತ್ನಿ ರೇಣುಕಾ ಜೊತೆಗೆ ವಿಪರೀತ ಜಗಳವಾಡಿದ್ದಾನೆ. ಬಳಿಕ ಜಗಳ ಮಿತಿಮೀರಿ ರೇಣುಕಾ ತನ್ನ ಪತಿಯ ಕುತ್ತಿಗೆಗೆ ಹಗ್ಗದಿಂದ ಕಟ್ಟಿದ್ದಾಳೆ ದಿಂಬಿನಿಂದ ಉಸಿರುಗಟ್ಟಿಸಿದ್ದಾಳೆ. ಈ ವೇಳೆ ರೇಣುಕಾ ತಾಯಿ ಶೋಭಾ ಮಗಳಿಗೆ ಸಾಥ್ ನೀಡಿದ್ದಾರೆ.

ತಾಯಿ, ಮಗಳು ಸೇರಿ ಶವವನ್ನು ಮನೆಯ ಮುಂಭಾಗದಲ್ಲಿ ಬಿಸಾಡಿದ್ದಾರೆ. ಪತಿ ಮದ್ಯಪಾನ ಮಾಡಿ ಮನೆ ಮುಂದೆ ಬಿದ್ದಿದ್ದಾನೆ ಎಂದು ತಾಯಿ ಮಗಳು ಬೆಳಗ್ಗೆ ಅಕ್ಕಪಕ್ಕದ ಮನೆಯವರನ್ನು ಕರೆದು ಗೋಗರೆದಿದ್ದಾರೆ. ಇದು ಕೊಲೆಯಲ್ಲ ಇದೊಂದು ಸಹಜ ಸಾವು ಅನ್ನುವ ಹಾಗೆ ಬಿಂಬಿಸಿದ್ದಾರೆ.

ಈ ಸಮಯದಲ್ಲಿ ವಿನಾಯಕ್ ಜಾಧವ್ ಸಹೋದರ ಅರುಣ ಸಾವಿನಲ್ಲಿ ಶಂಕೆ ಇದೆ ಎಂದು ದೂರು ನಿಡಿದ್ದನು. ಬೆಳಗಾವಿ ಗ್ರಾಮೀಣ ಪೊಲೀಸರುಮೇತನ ದೇಹವನ್ನು ಪೋಸ್ಟ್ ಮಾರ್ಟಮ್‌ಗೆ ಕಳುಹಿಸಿದ್ದರು. ಅದರಲ್ಲಿ ಇದು ಸಹಜ ಸಾವಲ್ಲ ಕೊಲೆ ಎಂದು ತಿಳಿದು ಬಂದಿದ್ದು ಕೊಲೆಯ ರಹಸ್ಯ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಸಿದ ರೇಣುಕಾ ಮತ್ತು ಶೋಭಾಳನ್ನು ಪೋಲಿಸರು ಬಂಧಿಸಿದ್ದಾರೆ.

Exit mobile version