Site icon Vistara News

Road Accident: ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದ ಬೈಕ್‌, ಸವಾರ ಸಾವು

belagavi accident death

ಬೆಳಗಾವಿ: ನಿಂತಿದ್ದ ಟ್ರಾಕ್ಟರ್‌ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದ (Road Accident) ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗೋಕಾಕ (belagavi news) ಬಳಿ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಬಸವರಾಜ್ ಬಡಿಗೇರ(31) ಮೃತಪಟ್ಟ ವ್ಯಕ್ತಿ. ಗೋಕಾಕದಿಂದ ತಳಕಟನಾಳ ಗ್ರಾಮಕ್ಕೆ ಬರುವಾಗ ತಪಸಿಕ್ರಾಸ್- ಕಪರಟ್ಟಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರಾಕ್ಟರ್‌ಗೆ ಬೈಕ್‌ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್‌ಗಳ ಡಿಕ್ಕಿ, ಬಸ್‌ ಹರಿದು ಗಂಭೀರ ಗಾಯ

ಮಂಗಳೂರು: ಎರಡು ಬೈಕ್‌ಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಸವಾರ ಕೆಳಗೆ ಬಿದ್ದು, ಅವರ ಮೇಲೆ ಬಸ್‌ ಹರಿದುದರಿಂದ ಗಂಭೀರ ಗಾಯಕ್ಕೊಳಗಾಗಿದ್ದಾರೆ. ಮಂಗಳೂರಿನ ಉಳ್ಳಾಲದ ಕೋಟೆಕಾರ್ ಜಂಕ್ಷನ್‌ ಬಳಿ ಘಟನೆ ನಡೆದಿದೆ.

ಕೃಷ್ಣ ಶೆಟ್ಟಿ ತಾಮಾರ್(65) ಎಂಬವರು ಗಂಭೀರ ಗಾಯಗಳಿಗೀಡಾಗಿದ್ದಾರೆ. ಇವರು ಸ್ಥಳಿಯ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇವರು ಪ್ರಯಾಣ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಇನ್ನೊಂದು ಬೈಕ್‌ ಡಿಕ್ಕಿಯಾಗಿದೆ. ಹಿಂಬದಿಯಿಂದ ಗುದ್ದಿದ ಕಾರಣ ಕೃಷ್ಣ ಶೆಟ್ಟಿ ರಸ್ತೆಗೆ ಉರುಳಿದ್ದರು. ಈ ಸಂದರ್ಭದಲ್ಲಿ ಅಪಘಾತಕ್ಕೀಡಾದ ವಾಹನ ಹಾಗೂ ರಸ್ತೆಗೆ ಬಿದ್ದಿದ್ದವರ ಮೇಲೆ ಕರ್ನಾಟಕದಿಂದ ಕೇರಳಕ್ಕೆ ಸಂಚರಿಸುತ್ತಿದ್ದ KSRTC ಬಸ್ ಹರಿದಿತ್ತು. ಬಸ್ ಗುದ್ದಿದ್ದರಿಂದ ಕೃಷ್ಣ ಶೆಟ್ಟಿ ಗಂಭಿರ ಗಾಯಗೊಂಡಿದ್ದು, ಮತ್ತೊಬ್ಬ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ. ಅಪಘಾತದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Road Accident : ಒನ್‌ ವೇನಲ್ಲಿ ಬಂದ ಬೈಕ್‌ಗೆ ಕಾರು ಡಿಕ್ಕಿ; ಎಗರಿ ಬಿದ್ದ ಸವಾರ ಸಾವು

Exit mobile version