Site icon Vistara News

Anand Mamani | ಸವದತ್ತಿಯತ್ತ ಡೆಪ್ಯುಟಿ ಸ್ಪೀಕರ್‌ ಆನಂದ ಮಾಮನಿ ಪಾರ್ಥಿವ ಶರೀರ

Anand Mamani

ಬೆಳಗಾವಿ: ತೀವ್ರ ಅನಾರೋಗ್ಯದಿಂದ ವಿಧಿವಶರಾಗಿರುವ ಡೆಪ್ಯುಟಿ ಸ್ಪೀಕರ್ ‌ಆನಂದ ಮಾಮನಿ ಅವರ ಪಾರ್ಥಿವ ಶರೀರವನ್ನು (Anand Mamani) ಬೆಂಗಳೂರಿನ ಮಣಿಪಾಲ್ ‌ಆಸ್ಪತ್ರೆಯಿಂದ ಸವದತ್ತಿಯತ್ತ ತರಲಾಗುತ್ತಿದೆ.

ಸವದತ್ತಿಗೆ ಆನಂದ ಮಾಮನಿ ಪಾರ್ಥಿವ ಶರೀರ ಆಗಮಿಸಲಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಆನಂದ ಮಾಮನಿ ನಿವಾಸಕ್ಕೆ ಬೈಲಹೊಂಗಲ ಎಸಿ ಶಶಿಧರ ಬಗಲಿ ಭೇಟಿ, ಕುಟುಂಬಸ್ಥರ ಜೊತೆಗೆ ಚರ್ಚೆ ನಡೆಸಿದ್ದಾರೆ. ಯಡ್ರಾಂವಿ ರಸ್ತೆಯಲ್ಲಿರುವ ಮಾಮನಿ ಅವರ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಮುರಗೇಶ ನಿರಾಣಿ, ಗೋವಿಂದ ಕಾರಜೋಳ ಭಾಗವಹಿಸುವ ಸಾಧ್ಯತೆ ಇದೆ.

Exit mobile version