Site icon Vistara News

Ballari News: ಬಳ್ಳಾರಿಯಲ್ಲಿ ಮಾ.9ರಂದು ದಶಮಾನಂ ಸ್ಮರಣೇಯಂ ಕಾರ್ಯಕ್ರಮ

R.R. Hemadri Bhatt

ಬಳ್ಳಾರಿ: ಆಸರೆ ಟ್ರಸ್ಟ್ ವತಿಯಿಂದ ದಿ.ಆರ್.ಆರ್.ಹೇಮಾದ್ರಿ ಭಟ್ ಸಂಸ್ಮರಣಾ ಅಂಗವಾಗಿ ದಶಮಾನಂ ಸ್ಮರಣೇಯಂ ಕಾರ್ಯಕ್ರಮವನ್ನು ಮಾ.9ರಂದು ಸಂಜೆ 6 ಗಂಟೆಗೆ ಬಳ್ಳಾರಿಯ ಗಾಂಧಿನಗರದಲ್ಲಿರುವ ಬಾಲಭಾರತಿ ಶಾಲೆಯಲ್ಲಿ (Ballari News) ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಅಧ್ಯಕ್ಷ ಬಸವರಾಜ‌ ಪಾಟೀಲ್ ಸೇಡಂ ವಿಶೇಷ ಉಪನ್ಯಾಸ ನೀಡಲಿದ್ದಾರೆ‌. ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಜಂಟಿ ಆಯುಕ್ತೆ ಡಾ. ರಶ್ಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Virat Kohli : ಗುರುಗ್ರಾಮದಲ್ಲಿ ಬೃಹತ್​ ಕಚೇರಿ ಸ್ಥಳ ಬುಕ್​ ಮಾಡಿದ ಕೊಹ್ಲಿ; ಬಾಡಿಗೆ ಎಷ್ಟು ಗೊತ್ತೇ?

ಕಾರ್ಯಕ್ರಮದಲ್ಲಿ ಕಲ್ಯಾಣ ಸ್ವಾಮೀಜಿ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಲಿದ್ದಾರೆ. ಬಳ್ಳಾರಿಯ ಶ್ರೀ ನಿಧಿ ಇನ್‌ಸ್ಟಿಟ್ಯೂಟ್ಸ್ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್‌ ವತಿಯಿಂದ ಅಯೋಧ್ಯೆ ಶ್ರೀರಾಮ ನೃತ್ಯ ರೂಪಕ ಪ್ರಸ್ತುತ ಪಡಿಸಲಿದ್ದಾರೆ ಎಂದು ಆಸರೆ ಟ್ರಸ್ಟ್‌ನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version