Site icon Vistara News

Accident | ಕ್ಯಾಂಟರ್‌ ಡಿಕ್ಕಿ, ಪಾದಚಾರಿ ಸಾವು

death1

ನೆಲಮಂಗಲ: ಪಾದಚಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಬಳಿ ಈ ಅಪಘಾತ ನಡೆದಿದೆ. ಮಾಗಡಿ ತಾಲೂಕು ಮೋಟಗೊಂಡನಹಳ್ಳಿ ಮೂಲದ ಜಗದೀಶ್ (47) ಅವರು ಮೃತ ಪಾದಚಾರಿ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಶಾಲೆಗೆ ಹೋಗದ್ದಕ್ಕೆ ಬೈದ ತಾಯಿ, ಬಾಲಕ ಆತ್ಮಹತ್ಯೆ

Exit mobile version