Site icon Vistara News

ತೂಬಗೆರೆಯ ವೆಂಕಟೇಶ್ವರ ಜಾತ್ರೆಯಲ್ಲಿ ತೇರು ಎಳೆದ ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ

Venkateshwara Rathotsava 3

ದೇವನಹಳ್ಳಿ: ತಾಲೂಕಿನ ಮಾಡಿ ತೂಬಗೆರೆ ಹೋಬಳಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ ಹಾಗೂ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅವರು ಒಟ್ಟಿಗೆ ತೇರು ಎಳೆದು ವೆಂಕಟೇಶ್ವರ ಜಾತ್ರಾ ಮಹೋತ್ಸವಕ್ಕೆ (Venkateswara Jatre) ಚಾಲನೆ ನೀಡಿದರು.

ಸ್ವತಃ ವೀರಪ್ಪ ಮೊಯ್ಲಿ ಅವರು ರಕ್ಷಾ ರಾಮಯ್ಯ ಅವರನ್ನು ವೆಂಕಟೇಶ್ವರ ಸನ್ನಿಧಿಗೆ ಕರೆದೊಯ್ದರು. ನಂತರ ಇಬ್ಬರೂ ಮುಖಂಡರು ದೇವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯವರು ಉಭಯ ನಾಯಕರಿಗೆ ಹಾರ ಹಾಕಿ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಪಕ್ಷದ ಬ್ಲಾಕ್ ಅಧ್ಯಕ್ಷರು, ಪಕ್ಷದ ವಿವಿಧ ಘಟಕಗಳ ಮುಖಂಡರು. ಕಾರ್ಯಕರ್ತರು ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Holi 2024: ಭಾವ್ಯಕ್ಯತೆಯನ್ನು ಬೆಸೆಯುವ ವಿಶಿಷ್ಟ ಹಬ್ಬ ಹೋಳಿ ಹುಣ್ಣಿಮೆ

Exit mobile version