Site icon Vistara News

Accidental Death | ಪಾರ್ಟಿ ಮಾಡಲು ತೆರಳಿದ್ದ ಯುವಕ ನೀರಿಗೆ ಬಿದ್ದು ಸಾವು

Accidental Death

ಬೆಂಗಳೂರು: ಸಾದಹಳ್ಳಿ ಕಲ್ಲುಕ್ವಾರಿಯಲ್ಲಿ ಭಾನುವಾರ ರಾತ್ರಿ (ಸೆ.18) ಪಾರ್ಟಿ ಮಾಡಲು ತೆರಳಿದ್ದ ಯುವಕ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ (Accidental Death). ಕಾಲು ಜಾರಿ ಬಂಡೆ ಮೇಲಿಂದ ಬಿದ್ದಿರುವುದಾಗಿ ತಿಳಿದು ಬಂದಿದೆ.

ಯುವಕ ಗಂಗರಾಜು (26) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಗಂಗರಾಜು ಸಾದಹಳ್ಳಿ ಬಂಡೆಯಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ ಸ್ನೇಹಿತರ ಜತೆ ಪಾರ್ಟಿಗೆ ತೆರಳಿದ್ದ. ಈ ವೇಳೆ ಕಾಲು ಜಾರಿ ಬಂಡೆ ಮೇಲಿಂದ ಬಿದ್ದಿದ್ದಾನೆ.

170 ಅಡಿ ಆಳವಿದ್ದ ಕಲ್ಲು ಕ್ವಾರಿ ಮೇಲಿಂದ ಬಿದ್ದಿದ್ದು, ಮೃತಪಟ್ಟಿದ್ದಾನೆ. ಸತತ 12 ಗಂಟೆಗಳ ಕಾಲ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದಾರೆ. ಸೋಮವಾರ ಬೆಳಗ್ಗೆ 8.30ಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ. ಮರೋಣತ್ತರ ಪರೀಕ್ಷೆಗಾಗಿ ಮೃತದೇಹವನ್ನು ರವಾನೆ ಮಾಡಲಾಗಿದೆ. ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Accidental death | ಪಾಳುಬಿದ್ದ ಕಲ್ಲು ಕೋರೆಯಲ್ಲಿ ಈಜಲು ತೆರಳಿದ್ದ ಯುವಕ ಸಾವು

Exit mobile version