Site icon Vistara News

ರಂಜಾನ್ ಹಬ್ಬಕ್ಕೆ ಬಟ್ಟೆ ತರಲು ಹೋದ ಯುವಕ ಅಪಘಾತದಲ್ಲಿ ಸಾವು

ಬೆಂಗಳೂರು: ರಂಜಾನ್ ಹಬ್ಬಕ್ಕೆ ಬಟ್ಟೆ ತರಲು ಹೋಗಿ ಅಪಘಾತಕ್ಕಿಡಾಗಿ ಗಾಯಗೊಂಡಿದ್ದ ಯುವಕನ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ.

19 ವರ್ಷದ ಮೆಹರಾಜ್‌ ಮೃತ ಯುವಕ. ಮೆಹರಾಜ್‌ ಪೂರ್ವಿಕಾ ಮೊಬೈಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಕಲಾಸಿಪಾಳ್ಯದ ನಿವಾಸಿಗಳಾಗಿದ್ದ ಮೊಹಮ್ಮದ್ ಅಲಿ ಜಿನ್ನಾ ಹಾಗೂ ಮೆಹರಾಜ್ ಏಪ್ರಿಲ್ 18 ರಂದು ಮಧ್ಯ ರಾತ್ರಿ 12ಕ್ಕೆ ಪಲ್ಲವಿ ಥಿಯೇಟರ್ ಮುಂಭಾಗ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಶಿವಾಜಿನಗರದಿಂದ ಪಲ್ಲವಿ ಥಿಯೇಟರ್ ಕಡೆ ಬರುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿ ಹೊಡೆದಿತ್ತು. ನಡೆದ ಘಟನೆಯಲ್ಲಿ ಜಿನ್ನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

19 ವರ್ಷದ ಮೆಹರಾಜ್ ಗೆ 6 ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಮೆಹರಾಜ್ ಪೂರ್ವಿಕಾ ಮೊಬೈಲ್ಸ್ ನಲ್ಲಿ ಕೆಲಸ ಮಾಡುತಿದ್ದ, ಜತೆಗೆ ಒಬ್ಬನೇ ಮಗನಾಗಿದ್ದು ಕುಟುಂಬದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಅಪಘಾತ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ | Bike Accident ನಲ್ಲಿ ಯುವಕನ ಸಾವು, ಅಪಘಾತವಲ್ಲ ಕೊಲೆ ಎಂದ ಕುಟುಂಬ

Exit mobile version