Site icon Vistara News

Independence Day | ಬಿಎಂಟಿಸಿ ರಜತ ಮಹೋತ್ಸವ; ಚಾಲನಾ ಕೌಶಲಕ್ಕಾಗಿ 100 ಚಾಲಕರಿಗೆ ಬೆಳ್ಳಿ ಪದಕ

Independence Day

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪೂರ್ವ ವಿಭಾಗದ ಕೋರಮಂಗಲ ಘಟಕ -15ರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ(Independence Day) ಹಾಗೂ ಬೆ.ಮ.ಸಾ.ಸಂ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ 100 ಚಾಲಕರಿಗೆ ಅವರ ಅಸಾಧಾರಣ ಅಪಘಾತ ಮುಕ್ತ ಚಾಲನಾ ಕೌಶಲ ಕ್ಕಾಗಿ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.

ಇದಕ್ಕೂ ಮುನ್ನಾ ಬೆ.ಮ.ಸಾ.ಸಂ ಭದ್ರತಾ ಮತ್ತು ಜಾಗೃತ ವಿಭಾಗದ ನಿರ್ದೇಶಕಿ, ಐಪಿಎಸ್‌ ಅಧಿಕಾರಿ ರಾಧಿಕಾ.ಜಿ ಧ್ವಜಾರೋಹಣ ನೆರವೇರಿಸಿದರು. ಘಟಕ ವ್ಯವಸ್ಥಾಪಕ ವಿ. ನಿ. ಶ್ರೀ. ಶರಣ ಬಸವರಾಜ್, ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಅಸಾಧಾರಣ ಅಪಘಾತ ಮುಕ್ತ ಚಾಲನಾ ಕೌಶಲ್ಯಕ್ಕಾಗಿ ಬೆಳ್ಳಿ ಪದಕ ಪಡೆದ ಬಿಎಂಟಿಸಿ ಬಸ್ ಚಾಲಕರು.

ಇದನ್ನೂ ಓದಿ | Independence day| ವಿದುರಾಶ್ವತ್ಥದ ಹುತಾತ್ಮರ ಸಮಾಧಿಗೆ ಬಿ.ಎಲ್ ಸಂತೋಷ್‌ ಪುಷ್ಪನಮನ

Exit mobile version