Site icon Vistara News

ರಾಜಕಾಲುವೆಗೆ ಬಿದ್ದ ಮಗು ಮೂರು ದಿನವಾದರೂ ಪತ್ತೆಯಿಲ್ಲ

child drown

ಬೆಂಗಳೂರು: ವರ್ತೂರಿನಲ್ಲಿ ರಾಜಕಾಲುವೆಗೆ ಮಗು ಬಿದ್ದು ನಾಪತ್ತೆಯಾದ ಪ್ರಕರಣದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ದಿನಗಳಿಂದ ಹುಡುಕಾಟ ನಡೆಸಿದ್ದು, ಮಗುವಿನ ಪತ್ತೆಯಾಗಿಲ್ಲ.

ನೇಪಾಳ ಮೂಲದ ಬಿನೋದ್ ಸೌದ್ ಹಾಗೂ ಸ್ವಪ್ನ ದಂಪತಿಯ ಪುತ್ರ ಕಬೀರ್(3) ನಾಪತ್ತೆಯಾದ ಬಾಲಕ. ಬಳಗೆರೆಯ ಅಪಾರ್ಟ್‌ಮೆಂಟ್‌ ಬಳಿ ಭಾನುವಾರ ಮಕ್ಕಳೊಂದಿಗೆ ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದಿದ್ದಾನೆ. ಪೋಷಕರು ಕಬೀರ್ ಜತೆ ಆಟವಾಡುತ್ತಿದ್ದ ಮಕ್ಕಳ ಬಳಿ ಕೇಳಿದಾಗ ರಾಜಕಾಲುವೆಯತ್ತ ಬೊಟ್ಟು ಮಾಡಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು‌ ವರ್ತೂರು ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಪೊಲೀಸರೊಂದಿಗೆ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿ ಬಾಲಕನಿಗಾಗಿ ಹುಡುಕಾಟ ನಡೆಸಿದರು.

6 ತಿಂಗಳ ಹಿಂದೆ ಹೊಟ್ಟೆಪಾಡಿಗಾಗಿ ವರ್ತೂರಿಗೆ ಬಂದು ನೆಲೆಸಿರುವ ನೇಪಾಳ ಮೂಲದ ಮಗುವಿನ ಕುಟುಂಬದವರು, ಮಗನ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. 3 ದಿನಗಳಿಂದ ಮಗುವಿನ ಹುಡುಕಾಟ ನಡೆಸುತ್ತಿದ್ದರೂ ಫಲ ದೊರೆತಿಲ್ಲ. ನಿನ್ನೆ ರಾತ್ರಿಯಾದ ಕಾರಣ ಹುಡುಕಾಟ ನಿಲ್ಲಿಸಲಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ | Boy drowned | ಆಟವಾಡುತ್ತಿದ್ದಾಗ ರಾಜಕಾಲುವೆಗೆ ಬಿದ್ದು 3 ವರ್ಷದ ಬಾಲಕ ನಾಪತ್ತೆ

Exit mobile version