Site icon Vistara News

Translation Workshop: ಮಕ್ಕಳ ಸಾಹಿತ್ಯಕ್ಕೆ ಹೊಸ ಸ್ಪರ್ಶ ಅಗತ್ಯ: ನಾಗೇಶ ಹೆಗಡೆ

Nagesh Hegde

ಬೆಂಗಳೂರು: ಮಕ್ಕಳ ಸಾಹಿತ್ಯಕ್ಕೆ ಹೊಸ ಸ್ಪರ್ಶದ ಅಗತ್ಯವಿದೆ. ಮಕ್ಕಳ ಸಾಹಿತ್ಯ ಲೋಕದಲ್ಲಿ (Children’s Literature) ಸಾಕಷ್ಟು ಪ್ರಯೋಗಗಳು ಜರುಗಬೇಕಿದ್ದು ಸಮಕಾಲೀನ ಸಂಗತಿಗಳನ್ನು ಅದರ ಚೌಕಟ್ಟಿನೊಳಗೆ ತರಬೇಕು ಎಂದು ಹಿರಿಯ ಲೇಖಕ, ಅಂಕಣಕಾರ ನಾಗೇಶ ಹೆಗಡೆ ಅವರು ಅಭಿಪ್ರಾಯಪಟ್ಟರು.

ಪರಾಗ್ ಹಾಗೂ ಬಹುರೂಪಿ ಪ್ರಕಾಶನ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಮಕ್ಕಳ ಕೃತಿಗಳ ಭಾಷಾಂತರ ಕಾರ್ಯಾಗಾರದಲ್ಲಿ (Translation Workshop) ನಡೆದ ಸಾಹಿತಿಯೊಂದಿಗೆ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಜ್ಞಾನ ಸಂವಹನ ಹೇಗೆ ಸರಳ ಭಾಷೆಯನ್ನು ಹೊಂದಿ, ಜನರಿಗೆ ಅರ್ಥವಾಗಬೇಕು ಎಂದು ಬಯಸುತ್ತೇನೋ ಮಕ್ಕಳ ಸಾಹಿತ್ಯ ರಚಿಸುವಾಗಲೂ ಅದೇ ಸೂತ್ರವನ್ನು ಅಳವಡಿಸಿಕೊಂಡಿದ್ದೇನೆ. ಮಕ್ಕಳ ಸಾಹಿತ್ಯಕ್ಕೆ ಹೊಸ ಆಯಾಮ ನೀಡುವಲ್ಲಿ, ಬೇರೆ ಭಾಷೆಯ ಮಕ್ಕಳ ಸಾಹಿತ್ಯವನ್ನು ಕನ್ನಡಕ್ಕೆ ತರಲು ಯತ್ನಿಸುತ್ತಿರುವ ಪರಾಗ್ ಹಾಗೂ ಬಹುರೂಪಿ ಕಾರ್ಯವನ್ನು ಅವರು ಶ್ಲಾಘಿಸಿದರು.

ಇದನ್ನೂ ಓದಿ | Translation Workshop: ಓದುವ ಸಂಸ್ಕೃತಿ ಹರಡಬೇಕು: ಸಾಹಿತಿ ಎಂ. ಅಬ್ದುಲ್ ರೆಹಮಾನ್ ಪಾಷಾ

ಪರಾಗ್‌ನ ಲಕ್ಷ್ಮಿ ಕರುಣಾಕರನ್, ಬಹುರೂಪಿಯ ಜಿ.ಎನ್.ಮೋಹನ್, ಶ್ರೀಜಾ ವಿ.ಎನ್., ಮಕ್ಕಳ ಸಾಹಿತ್ಯ ತಜ್ಞರಾದ ಎಂ ಅಬ್ದುಲ್ ರೆಹಮಾನ್ ಪಾಷಾ, ತೇಜಸ್ವಿ ಶಿವಾನಂದ್ ಉಪಸ್ಥಿತರಿದ್ದರು.

Exit mobile version