Site icon Vistara News

Fire tragedy: ಬಿಎಂಟಿಸಿ ಬಸ್ಸಿಗೆ ಬೆಂಕಿ, ಕಂಡಕ್ಟರ್‌ ಸಜೀವ ದಹನ

bmtc bus fire

ಬೆಂಗಳೂರು: ಬಸ್‌ ಅಗ್ನಿಗೆ ಆಹುತಿಯಾದ ಪರಿಣಾಮ ಬಿಎಂಟಿಸಿ ಬಸ್ಸಿನಲ್ಲಿ ಮಲಗಿದ್ದ ನಿರ್ವಾಹಕರೊಬ್ಬರು ಸಜೀವ ದಹನಗೊಂಡ ಘಟನೆ ಲಿಂಗಧೀರನಹಳ್ಳಿಯಲ್ಲಿ ನಡೆದಿದೆ.

ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗಧೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮುತ್ತಯ್ಯಸ್ವಾಮಿ (45) ಮೃತ ಕಂಡಕ್ಟರ್.‌ ಬಸ್ಸಿಗೆ ಇದ್ದಕ್ಕಿದ್ದಂತೆ

31ನೇ ಸುಮ್ಮನಹಳ್ಳಿ ಬಸ್ ಡಿಪೋ ಸೇರಿರುವ KA57F2069 ನಂಬರಿನ BMTC ಬಸ್‌ ಅನ್ನು ಚಾಲಕ ಪ್ರಕಾಶ್‌ ಹಾಗೂ ನಿರ್ವಾಹಕ ಮುತ್ತಯ್ಯ ಸ್ವಾಮಿ ನಡೆಸುತ್ತಿದ್ದರು. ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿ ಇಬ್ಬರೂ ಮಲಗಿದ್ದರು. ಬೆಳಗ್ಗೆ 4 ಗಂಟೆ ವೇಳೆ ಚಾಲಕ ಪ್ರಕಾಶ್‌ ಎದ್ದು ಶೌಚಕ್ಕೆ ಹೋದಾಗ ಬಸ್ಸಿಗೆ ಬೆಂಕಿ ಹತ್ತಿಕೊಂಡಿದೆ. ಬಸ್ಸು ಸುಟ್ಟು ಕರಕಲಾಗಿದ್ದು, ಮುತ್ತಯ್ಯ ಸ್ವಾಮಿ ಕೂಡ ದಹಿಸಿಹೋಗಿದ್ದಾರೆ. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: Fire tragedy : ಸರ್ಜಾಪುರ ರಸ್ತೆಯಲ್ಲಿ ಕರ್ಲಾನ್‌ ಹಾಸಿಗೆ ಮಳಿಗೆಯಲ್ಲಿ ಬೆಂಕಿ ಅವಘಡ, ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಶಾಪ್‌

Exit mobile version