ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಚಿರತೆಯ (Leopard) ಭೀತಿ ಶುರುವಾಗಿದೆ. ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿಶ್ವವಿದ್ಯಾಲಯ ಪ್ರವೇಶವನ್ನು ಬಂದ್ ಮಾಡಲಾಗಿದೆ.
ಚಿರತೆಯೊಂದು ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿಕೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ವಿವಿಗೆ ಸಂಪರ್ಕಿಸುವ ನಾಗರಭಾವಿ ರಸ್ತೆಯನ್ನು ಬಂದ್ ಮಾಡಿದ್ದಾರೆ. ಈ ಮಾರ್ಗವಾಗಿ ಬರುತ್ತಿರುವ ವಾಹನಗಳನ್ನು ಪ್ರವೇಶಿ ನಿರಾಕರಿಸಿ, ಬೇರಡೆಗೆ ಕಳುಹಿಸಲಾಗಿದೆ.
ಯಾರನ್ನೂ ರಸ್ತೆಯಲ್ಲಿ ಬಿಡದಂತೆ ಸೂಚನೆ ನೀಡಲಾಗಿದೆ. ನಿರ್ದಿಷ್ಟ ಸಮಯದಲ್ಲಿ ಯಾವ ಗಾಡಿಗಳನ್ನು ಪೊಲೀಸರು ಬಿಟ್ಟಿಲ್ಲ. ಜ್ಞಾನ ಭಾರತಿ ಪೊಲೀಸರಿಂದ ಗೇಟ್ ಬಂದ್ ಮಾಡಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಒಬ್ಬಂಟಿಯಾಗಿ ಕ್ಯಾಂಪಸ್ನಲ್ಲಿ ಓಡಾಡದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ | Leopard Attack | ಮಂಡ್ಯದಲ್ಲಿ ನಿಲ್ಲದ ಚಿರತೆ ಹಾವಳಿ; 6 ಮೇಕೆಗಳ ಕೊಂದು, 4 ಮೇಕೆಗಳನ್ನು ಹೊತ್ತೊಯ್ದ ಚಿರತೆಗಳು