Site icon Vistara News

Bangalore rain | ಬೊಮ್ಮನಹಳ್ಳಿಯಲ್ಲಿ ಮನೆಗಳಿಗೆ ಬೇಲಿ ಹಾಕಿದ ನೀರು

rain water drain

ಬೆಂಗಳೂರು: ರಾತ್ರಿ ಸುರಿದ ಮಳೆಯಿಂದಾಗಿ ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ನಿವಾಸಿಗಳಿಗೆ ಜಲದಿಗ್ಭಂದನ ಉಂಟಾಗಿದೆ.

ಲೇಔಟ್ ಪಕ್ಕದಲ್ಲಿ ಹರಿಯುವ ರಾಜಕಾಲುವೆ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ, ಭಾರಿ ಮಳೆಯಿಂದಾಗಿ ನೀರು ನುಗ್ಗಿದೆ. ರಾತ್ರಿಯಿಡೀ ಲೇಔಟ್ ನಿವಾಸಿಗಳು ನಿದ್ರೆ ಮಾಡದೆ ಪಾಡು ಪಟ್ಟಿದ್ದಾರೆ. ತಗ್ಗು ಪ್ರದೇಶದಲ್ಲಿರುವ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ನಿವಾಸಿಗಳು ಮನೆಯಿಂದ ಹೊರ ಬರಲಾಗುತ್ತಿಲ್ಲ. ಅಗತ್ಯ ಸಾಮಗ್ರಿಗಳ ಖರೀದಿಗೆ ಬೈಕ್‌ನಲ್ಲಿ ತೆರಳಲು ಸರ್ಕಸ್ ಮಾಡುತ್ತಿದ್ದಾರೆ. ಬಿಬಿಎಂಪಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಇನ್ನೂ ಸ್ಥಳಕ್ಕೆ ಬಂದಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ | Rain news | ಮುಂದುವರಿದ ಮಳೆ, ರಾಮನಗರದಲ್ಲಿ ಕೆರೆ ಒಡೆದು ಮನೆಗಳಿಗೆ ನುಗ್ಗಿದ ನೀರು

Exit mobile version