Site icon Vistara News

ಪೊಲೀಸ್ ಠಾಣೆ ತಲುಪಿದ ನಿರ್ಮಾಪಕರ ವಲಯದ ಚುನಾವಣೆ ಪ್ರಕ್ರಿಯೆ!

ನಿರ್ಮಾಪಕರ ವಲಯದ ಚುನಾವಣೆ

ಬೆಂಗಳೂರು: ನಿರ್ಮಾಪಕರ ಸಂಘದ ಚುನಾವಣೆ ಪ್ರಕ್ರಿಯೆ ಪೊಲೀಸ್‌ ಠಾಣೆ ಮೆಟ್ಟಿಲರೇರಿದೆ. ಇದನ್ನು ತಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ನಟಿ ಪ್ರಮೀಳಾ ಜೋಷಾಯ್‌ ಮತ್ತು ನಿರ್ಮಾಪಕರು ಮಾಗಡಿ ರೋಡ್ ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದಾರೆ.

ಕೋರ್ಟ್ ಆದೇಶದಂತೆ 14/08/22 ಒಳಗೆ ನಿರ್ಮಾಪಕರ ಸಂಘದ ಚುನಾವಣೆ ಆಗಬೇಕಿತ್ತು. ನಾಮಪತ್ರ ವಾಪಸ್ ಪಡೆಯಲು 6ನೇ ದಿನಾಂಕ ಕೊನೆಯ ದಿನವಾಗಿತ್ತು. ನಾಮಪತ್ರ ವಾಪಸ್ ಪಡೆದು ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಅನೌನ್ಸ್‌ ಮಾಡಲು ಬಿಡುತ್ತಿಲ್ಲ.

ರಮೆಶ್ ಯಾದವ್, ಪ್ರವೀಣ್ ಕುಮಾರ್, ಆರ್‌.ಎಸ್‌. ಗೌಡ ಅವರಿಂದ ಚುನಾವಣೆ ಪ್ರಕ್ರಿಯೆಗೆ ಅಡ್ಡಿ ಆರೋಪ ಕೇಳಿಬಂದಿದೆ. ಅಲ್ಲದೆ, ನಾಮಿನೇಷನ್ ಬಾಕ್ಸ್ ತೆರೆಯಲು ಬಿಡುತ್ತಿಲ್ಲ. ಜತೆಗೆ ನಿರ್ಮಾಪಕರ ಸಂಘದ ಪದಾಧಿಕಾರಿಗಳಿಂದ ತೊಂದರೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಚುನಾವಣಾ ಅಧಿಕಾರಿಯ ಅಖಾಡದಲ್ಲಿ ಅಂತಿಮ ತಿರ್ಮಾನ ಆಗಬೇಕಿದೆ.

ಇದನ್ನೂ ಓದಿ | ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಮುಂದೂಡಿಕೆ: ಆಡಳಿತಾಧಿಕಾರಿಗಾಗಿ ಸಂಘ ಕೋರ್ಟ್‌ಗೆ

Exit mobile version