Site icon Vistara News

Director ಉಪೇಂದ್ರ Returns: ಪಾನ್‌ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ

ರಿಯಲ್‌ ಸ್ಟಾರ್‌ ಉಪೇಂದ್ರ.

ಬೆಂಗಳೂರು: ಕನ್ನಡದ ಬೆಸ್ಟ್‌ ನಿರ್ದೇಶಕರಲ್ಲಿ ಒಬ್ಬರಾದ ಉಪೇಂದ್ರ ಮತ್ತೆ ಡೈರೆಕ್ಟರ್‌ ಚೆಯರ್‌ಗೆ ಮರಳಲಿದ್ದಾರೆ (Director ಉಪೇಂದ್ರ Returns). ಈ ಬಾರಿ ಅವರು ಬರುತ್ತಿರುವುದು ಪಾನ್‌ ಇಂಡಿಯಾ ಸಿನಿಮಾದೊಂದಿಗೆ. ಅಂದರೆ, ಕೆಜಿಎಫ್‌, ಪುಷ್ಪ, ಆರ್‌ಆರ್‌ಆರ್‌ ನಂತರ ಮತ್ತೊಂದು ಮೆಗಾ ಸಿನಿಮಾ ದಕ್ಷಿಣದಿಂದ ಎದ್ದುಬರಲಿದೆ… ಉಪೇಂದ್ರ ನಿರ್ದೇಶನದಲ್ಲಿ.

2015ರಲ್ಲಿ ಉಪ್ಪಿ-2 ನಿರ್ದೇಶಿಸಿದ ಬಳಿಕ ನಟನೆಯಲ್ಲೇ ಕಾಲ ಕಳೆದ ಉಪ್ಪಿ ಈಗ ಮತ್ತೆ ಕ್ಯಾಮೆರಾ ಹಿಂದೆ ನಿಂತಿರುವ ವಿದ್ಯಮಾನವನ್ನು ಎಸ್‌.ಎಸ್‌. ರಾಜಮೌಳಿ, ಶಂಕರ್‌, ಪ್ರಶಾಂತ್‌ ನೀಲ್‌ರಂತಹ ಘಟಾನುಘಟಿ ನಿರ್ದೇಶಕರು ಪ್ರಶಂಸಿಸಿದ್ದಾರೆ. ಉಪ್ಪಿಯ ಈ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಕೆ.ಪಿ. ಶ್ರೀಕಾಂತ್‌ ಮತ್ತು ಜಿ ಮನೋಹರನ್‌ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ | ‘ಗನಿ’ ಚಿತ್ರದ ಟ್ರೇಲರ್‌ ರಿಲೀಸ್‌: ಬಾಕ್ಸರ್‌ ಲುಕ್‌ನಲ್ಲಿ ವರುಣ್‌ ತೇಜ್ ಮಿಂಚಿಂಗ್‌

ʼಕೆ. ಪಿ ಶ್ರೀಕಾಂತ ಅವರು ಒಳ್ಳೆಯ ನಿರ್ಮಾಪಕ ಮತ್ತು ಇಬ್ಬರೂ ನಿರ್ಮಾಪಕರ ಜೊತೆ ಸೇರಿ ಸಿನಿಮಾ ಮಾಡುತ್ತಿರುವುದು ಸಂತಸದ ವಿಚಾರ. ಈ ಸಿನಿಮಾದ ಮೂಲಕ ನಾನು ಅದ್ಭುತವಾದ ಸಿನಿಮ್ಯಾಟಿಕ್‌ ಎಕ್ಸ್‌ಪೀರಿಯನ್ಸ್‌ ನೀಡಲಿದ್ದೇನೆ. ಒಂದರ್ಥದಲ್ಲಿ ಅಭಿಮಾನಿಗಳೇ ಈ ಸಿನಿಮಾದ ಸಂಭಾಷಣೆ ಮತ್ತು ಚಿತ್ರಕಥೆಯನ್ನು ನನ್ನ ಮೂಲಕ ಬರೆಸಿದ್ದಾರೆ ಎನ್ನಬಹುದುʼ ಎಂದು ಉಪೇಂದ್ರ ಹೇಳಿದ್ದಾರೆ.

ಈ ಸಿನಿಮಾದ ಜೂನ್‌ 3ರಂದು ಮುಹೂರ್ತ ಆಗಲಿದ್ದು, ಫಸ್ಟ್‌ ಲುಕ್‌ ಸಹ ಅಂದೇ ರಿವೀಲ್‌ ಆಗಲಿದೆ. ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಮಹೂರ್ತ ನಡೆಯಲಿದ್ದು, ಸದ್ಯಕ್ಕೆ ಹೈದರಾಬಾದ್‌ನಲ್ಲಿ ಪೋಟೊಶೂಟ್‌ ಮಾಡುತ್ತಿದೆ.

ಸದಾ ಹೊಸ ಬಗೆಯ ಸಿನಿಮಾ ಮಾಡುವ ನಿರ್ದೇಶಕ ಉಪ್ಪಿ ಈ ಬಾರಿ ಪ್ರೇಕ್ಷಕರನ್ನು ಹೇಗೆ ಮನರಂಜಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ | ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್‌

Exit mobile version