Site icon Vistara News

Water supply : ಪೈಪ್ ವಾಲ್ವ್ ದುರಸ್ತಿ; ಅರ್ಧ ಬೆಂಗಳೂರಿಗೆ ನಾಳೆ ಕಾವೇರಿ ನೀರಿಲ್ಲ

Bwssb

ಬೆಂಗಳೂರು: ಜಲಮಂಡಳಿಯು (BWSSB) ಚಂದ್ರಾ ಬಡಾವಣೆಯ ಜಲಗಾರಕ್ಕೆ ನೀರು ಪೂರೈಕೆಯ (Water supply) ಮಾರ್ಗಗಳಲ್ಲಿರುವ ಪೈಪ್ ವಾಲ್ವ್ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾವೇರಿ 4ನೇ ಹಂತದ 1ನೇ ಫೇಸ್‌ನ ಮೂರು ಪಂಪ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಅರ್ಧ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಸೆ. 13ರಂದು ವ್ಯತ್ಯಯವಾಗಲಿದೆ.

ಮಹಾಲಕ್ಷ್ಮಿ ಲೇಔಟ್, ಜೆ.ಸಿ ನಗರ ಸುತ್ತಮುತ್ತ ಒಂದು ದಿನ ಕಾವೇರಿ ನೀರು ಪೂರೈಕೆ ಆಗುವುದಿಲ್ಲ. ಜತೆಗೆ ಆತ್ಮೀಯ ಗೆಳೆಯರ ಬಳಗ, ಶ್ರೀ ರಾಮನಗರ, ಮುನೇಶ್ವರ ಬ್ಲಾಕ್‌, ಜೆ.ಎಸ್‌ ನಗರ, ಮಹಾಲಕ್ಷ್ಮೀ ಲೇಔಟ್‌, ಬೋವಿ ಪಾಳ್ಯ, ಮೈಕೊ ಲೇಔಟ್, ಗಣೇಶ ಬ್ಲಾಕ್, ರಾಜಾಜಿನಗರ 2ನೇ ಬ್ಲಾಕ್‌ನಲ್ಲಿ ನೀರು ಬರುವುದಿಲ್ಲ.

ಇದನ್ನೂ ಓದಿ: Weather Report : ಸೆ.12ರಂದು ರಾಜ್ಯದ ಇಲ್ಲೆಲ್ಲ ಮಳೆ ನಿರೀಕ್ಷೆ

ಜತೆಗ ಡಾ. ರಾಜ್ ಕುಮಾರ್ ರೋಡ್, ಗುಬ್ಬಣ ಇಂಡಸ್ಟ್ರಿಯಲ್ ಲೇಔಟ್‌, ರಾಜಾಜಿನಗರ 4ನೇ ಎನ್ ಮತ್ತು ಎಮ್ ಬ್ಲಾಕ್, ರಾಜಾಜಿನಗರ ಡಿ ಬ್ಲಾಕ್, ಪ್ರಕಾಶ್ ನಗರ,3ನೇ ಹಂತ, ಪ್ರಕಾಶ್ ನಗರ, ಸುಬ್ರಹ್ಮಣ್ಯ ನಗರ, ಗಾಯತ್ರಿ ನಗರ, ನಂದಿನಿ ಲೇಔಟ್, ಜೆ.ಸಿ.ನಗರ ಸೇರಿ ಯಶವಂತಪುರ ಎ.ಪಿ.ಎಂ.ಸಿ, ಆರ್.ಎಂ.ಸಿ ಯಾರ್ಡ್, ಗೊರಗುಂಟೆಪಾಳ್ಯ, ಗಜಾನನ ಸ್ಲಮ್ 1 ಮತ್ತು 2 ಬಸವೇಶ್ವರ ನಗರ, ಬಿ.ಎಂ.ಇ.ಎಲ್ ಲೇಔಟ್, ಎನ್.ಜಿ.ಓ.ಎಸ್ ಕಾಲೋನಿ, ಗೃಹಲಕ್ಷ್ಮೀ ಲೇಔಟ್, ಜೆಸಿ ನಗರ, ಕಮಲನಗರ, ಕುರುಬರಹಳ್ಳಿಯಲ್ಲಿ ಸಮಸ್ಯೆ ಆಗಲಿದೆ.

ಹೌಸಿಂಗ್ ಬೋರ್ಡ್, ಶಾರದ ಕಾಲೋನಿ, ವ್ಯಷಭಾವತಿ ನಗರ, ಎಸ್.ಬಿ.ಐ. ಸ್ಕ್ಯಾಫ್ ಕಾಲೋನಿ, ಮಾರುತಿನಗರ, ಚಂದ್ರನಗರ, ಚೆನ್ನಿಗಪ್ಪ ಲೇಔಟ್, ವಿನಾಯಕ ನಗರ, ಗಂಗಣ್ಯ ಲೇಔಟ್, ಎ.ಕೆ ಕಾಲೋನಿ, ನಂಜಪ್ಪ ಲೇಔಟ್, ದಾಸರಹಳ್ಳಿ ಸೇರಿದಂತೆ ಹಲವೆಡೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನೀರಿನ ವ್ಯತ್ಯಯ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀರು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಜಲಮಂಡಳಿಯಿಂದ ಮನವಿ ಮಾಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version