Site icon Vistara News

Road Accident: ಬಸ್‌ ಓವರ್‌ಟೇಕ್ ಮಾಡಲು ಹೋಗಿ ಬೈಕ್‌ ಸವಾರ ಸಾವು; ಇನ್ನಿಬ್ಬರಿಗೆ ಗಂಭೀರ ಗಾಯ

Bike rider dies after trying to overtake bus at Harihara

Bike rider dies after trying to overtake bus at Harihara

ಹರಿಹರ: ಐರಾವತ ಬಸ್ಸನ್ನು ಓವರ್ ಟೇಕ್ (Overtake Bus) ಮಾಡಲು ಹೋಗಿ ಒಬ್ಬ ಬೈಕ್ ಸವಾರ (Bike rider) ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ ಗುತ್ತೂರು ಕೆ.ಇ.ಬಿ. ಕೇಂದ್ರದ ಬಳಿ ತಡರಾತ್ರಿ ಜರುಗಿದೆ.

ಮೃತನನ್ನು ಸಾರಥಿ ಗ್ರಾಮದ ನಾಗರಾಜ್ (25) ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತ ಬೈಕ್‌ನಲ್ಲಿ ಇಬ್ಬರು ಗೆಳೆಯರೊಡನೆ ಹರಿಹರಕ್ಕೆ ಬಂದು, ಸ್ವಗ್ರಾಮಕ್ಕೆ ಮರಳುವಾಗ ಈ ಅಪಘಾತ ಸಂಭವಿಸಿದೆ.

ಓವರ್ ಟೇಕ್ ಮಾಡುವ ಭರದಲ್ಲಿ ಆಯತಪ್ಪಿ ಬಿದ್ದು, ಬಸ್‌ನ ಹಿಂಬದಿ ಚಕ್ರಕ್ಕೆ ಸವಾರ ಸಿಲುಕಿ, ಹೆಲ್ಮೆಟ್ ಇರದ ಕಾರಣ ತಲೆಯ ಭಾಗ ಸಂಪೂರ್ಣವಾಗಿ ಜಜ್ಜಿ ಹೋಗಿ, ಗುರುತೇ ಸಿಗದ ರೀತಿಯಲ್ಲಿ ತಲೆಯ ಭಾಗ ಕಂಡುಬಂದಿರುವುದು ಅಪಘಾತದ ಭೀಕರತೆಯನ್ನು ತೆರೆದಿಟ್ಟಿತ್ತು. ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ಹರಿಹರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 250 ರೂ. ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ

ಕರೆ ಮಾಡಿ ಎರಡು ಗಂಟೆಗಳಾದರೂ ಅಪಘಾತ ನಡೆದ ಸ್ಥಳಕ್ಕೆ ಯಾವುದೇ ಸರ್ಕಾರಿ ಆಂಬುಲೆನ್ಸ್ ಬಾರದಿರುವುದು ಅಲ್ಲಿರುವ ಸಂಬಂಧಿಕರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version