Site icon Vistara News

Elephant Attack: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ

Biker escapes wild elephant attack in chamarajanagar

#image_title

ಚಾಮರಾಜನಗರ: ಕಾಡಾನೆ ದಾಳಿಯಿಂದ (Elephant Attack) ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪಾರಾಗಿರುವ ಘಟನೆ ಚಾಮರಾಜನಗರ-ತಮಿಳುನಾಡು ಗಡಿ ಭಾಗದ ತಾಳವಾಡಿಯ ತಲಮಲೈ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕಾಡಾನೆ ರಸ್ತೆ ದಾಟುತ್ತಿದ್ದಾಗ ಅದೇ ಮಾರ್ಗದಲ್ಲಿ ಬೈಕ್‌ ಸವಾರರೊಬ್ಬರು ಆಗಮಿಸಿದ್ದಾರೆ. ಇನ್ನೇನು ರಸ್ತೆ ದಾಟಿ ಮುಂದೆ ಹೋಗಬೇಕಿದ್ದ ಆನೆ ಏಕಾಏಕಿ ಬೈಕ್‌ ಸವಾರನತ್ತ ತಿರುಗಿದೆ. ಈ ವೇಳೆ ಭಯದಿಂದ ಸವಾರ ಬೈಕ್ ಸಮೇತ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿದ್ದಾರೆ. ನಂತರ ಆನೆ ಹತ್ತಿರಕ್ಕೆ ಬರುತ್ತಿದ್ದಂತೆ ಸವಾರ ಎದ್ದು ಓಡುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಎದುರುಗಡೆಯಿಂದ ಬರುತ್ತಿದ್ದ ಪ್ರಯಾಣಿಕರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Car Accident: ಕಾರು ರ‍್ಯಾಷ್‌ ಡ್ರೈವಿಂಗ್‌ಗೆ ಇಬ್ಬರು ಯುವಕರು ಬಲಿ; ಬಸ್‌ಗೆ ಡಿಕ್ಕಿ ಹೊಡೆದು ಕಾರು ಸಂಪೂರ್ಣ ಜಖಂ

Exit mobile version