Site icon Vistara News

BJP ಜನಸ್ಪಂದನ | ಸಮಾವೇಶಕ್ಕೆ ಬಂದಿದ್ದ ಹಿರಿಯ ನಾಗರಿಕ ಹೃದಯಾಘಾತದಿಂದ ಸಾವು

samaveshakke jana

ದೊಡ್ಡಬಳ್ಳಾಪುರ: ಇಲ್ಲಿನ ರಘುನಾಥಪುರದಲ್ಲಿ ನಡೆದ ಬಿಜೆಪಿ ಸರಕಾರದ ಸಾಧನಾ ಸಮಾವೇಶವಾದ ʻಜನಸ್ಪಂದನʼ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆ ತೊಟ್ಟಿಲಕೆರೆ ಗ್ರಾಮದ ಸಿದ್ದಲಿಂಗಪ್ಪ ( 70) ಮೃತಪಟ್ಟವರು. ಅವರು ತುಂಬಾ ಉತ್ಸಾಹದಿಂದ ಸಮಾವೇಶಕ್ಕೆ ಆಗಮಿಸಿದ್ದರು. ತುಮಕೂರಿನಿಂದ ಬಸ್ಸಿನಲ್ಲಿ ಬಂದು, ದೊಡ್ಡ ಬಳ್ಳಾಪುರದ ಪಾರ್ಕಿಂಗ್‌ ಪ್ರದೇಶದಿಂದ ನಡೆದುಕೊಂಡು ಸಮಾವೇಶ ಸ್ಥಳ ತಲುಪಿದ್ದರು.

ಸಮಾವೇಶದಲ್ಲಿ ಕುಳಿತಿದ್ದಂತೆಯೇ ಅವರಿಗೆ ಎದೆ ನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದರು. ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ದೊಡ್ಡ ಬಳ್ಳಾಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ಹೋಗುವ ದಾರಿಯಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದರು. ಬೆಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version