Site icon Vistara News

Book Release: ಬೆಂಗಳೂರಿನಲ್ಲಿ ಆ.10ರಂದು “ಆ ಮಧುರ ಕ್ಷಣಗಳು” ಪುಸ್ತಕ ಲೋಕಾರ್ಪಣೆ

Book Release

ಬೆಂಗಳೂರು: ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ಲೇಖಕಿ ರಮಾ ಶರ್ಮ ಅವರ ಚೊಚ್ಚಲ ಕೃತಿ “ಆ ಮಧುರ ಕ್ಷಣಗಳು” (ಒಂದು ಮಧುರಾನುಭವ) ಎಂಬ ಪುಸ್ತಕ ಲೋಕಾರ್ಪಣೆ (Book Release) ಸಮಾರಂಭವು ಬೆಂಗಳೂರು ನಗರದ ಕುಮಾರ ಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಆ.10 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಜರುಗಲಿದೆ.

ಇದನ್ನೂ ಓದಿ: Toyota: ಗ್ರಾಮೀಣ ಯುವ ಜನತೆಗೆ ಟೊಯೊಟಾದಿಂದ ಉತ್ತಮ ತರಬೇತಿ, ಶಿಕ್ಷಣ; ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ಲಾಘನೆ

ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಜಯಂತಿ ಮನೋಹರ್ ಪುಸ್ತಕ ಲೋಕಾರ್ಪಣೆ ಮಾಡುವರು. ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್. ಶಂಕರ್ ಅಧ್ಯಕ್ಷತೆ ವಹಿಸುವರು. ಲೇಖಕಿ ಗಿರೀಜಾ ರೈಕ್ವಾ ಪುಸ್ತಕ ಪರಿಚಯ ಮಾಡುವರು.

ಇದನ್ನೂ ಓದಿ: Train services: ಎಡಕುಮೇರಿಯಲ್ಲಿ ದುರಸ್ಥಿ ಪೂರ್ಣ; ರೈಲುಗಳ ಪುನರ್‌ ಆರಂಭವಾದರೂ ವೇಗದ ಮಿತಿಗೆ ನಿರ್ಬಂಧ

ಸಮಾರಂಭದಲ್ಲಿ ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿ ಶಶಿಧರ್ ರಾವ್ ಹಾಗೂ ಲೇಖಕಿ ರಮಾ ಶರ್ಮ ಅವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಾಶಕರಾದ ಕೆ.ಬಿ. ಪರಶಿವಪ್ಪ ಪ್ರಕಣಣೆಯಲ್ಲಿ ತಿಳಿಸಿದ್ದಾರೆ.

Exit mobile version