Site icon Vistara News

Book Release: ರಥಬೀದಿ ಎಕ್ಸ್‌ಪ್ರೆಸ್‌, ದೇವರಾಗಲು ಮೂರೇ ಗೇಣು, ಚಿಣ್ಣರ ಗೋಲಿ ಆಟ ಪುಸ್ತಕಗಳ ಅನಾವರಣ

#image_title

ಬೆಂಗಳೂರು: ಹರಿವು ಬುಕ್ಸ್​​ ಪ್ರಕಾಶನದ ವತಿಯಿಂದ ದೇವರಾಗಲು ಮೂರೇ ಗೇಣು, ರಥಬೀದಿ ಎಕ್ಸ್​ಪ್ರೆಸ್​ ಹಾಗೂ ಚಿಣ್ಣರ ಗೋಲಿ ಆಟ ಪುಸ್ತಕಗಳನ್ನು ಅನಾವರಣ (Book Release) ಮಾಡಲಾಯಿತು. ಬನಶಂಕರಿಯ ಸುಚಿತ್ರಾ ಸಿನಿಮಾ ಮತ್ತು ಕಲ್ಚರಲ್​ ಫೌಂಡೇಷನ್​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲೇಖಕ ಜಗದೀಶ್​ ಶರ್ಮಾ ಸಂಪ ಹಾಗೂ ಸಿನಿಮಾ ನಿರ್ದೇಶಕ, ಸಾಹಿತಿ ಹೃದಯಶಿವ ಪುಸ್ತಕಗಳನ್ನು ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಲೇಖಕ ಜಗದೀಶ್​ ಶರ್ಮಾ ಸಂಪ ಅವರು, ವಿಕಾಸ್​ ನೇಗಿಲೋಣಿ ಅವರ ರಥಬೀದಿ ಎಕ್ಸ್​ಪ್ರೆಸ್, ಡಾ.ಶಾಂತಲಾ ಅವರ ದೇವರಾಗಲು ಮೂರೇ ಗೇಣು ಹಾಗೂ ಯಶಸ್ವಿನಿಯವರು ಬರೆದ ಚಿಣ್ಣರ ಗೋಲಿ ಆಟ ಈ ಮೂರು ಪುಸ್ತಕಗಳು ಭಿನ್ನ ಭಿನ್ನವಾದ ವಿಷಯಗಳನ್ನು ತೆರೆದಿಡುತ್ತವೆ. ಬಾಲ್ಯದ ಘಟ್ಟಗಳನ್ನು ಬಿಚ್ಚಿಡುವ ಪ್ರಯತ್ನವನ್ನು ಮಾಡಿದೆ ಎಂದು ಪುಸ್ತಕಗಳ ಪರಿಚಯ ಮಾಡಿಕೊಟ್ಟರು.

ಇದನ್ನೂ ಓದಿ: IPL 2023: ಟಿಕೆಟ್‌ ಸೋಲ್ಡ್‌ಔಟ್‌ ಆದರೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನಸಾಗರ; ಗುಂಪು ಚದುರಿಸಲು ಲಾಠಿ ಚಾರ್ಜ್‌

ಇದೇ ವೇಳೆ ಮಾತನಾಡಿದ ಲೇಖಕ ವಿಕಾಸ್​ ನೇಗಿಲೋಣಿ, ಇದು ನನ್ನ ಐದನೇ ಪುಸ್ತಕವಾಗಿದೆ. ಬಾಲ್ಯದ ಲೋಕವನ್ನು ಬಿಚ್ಚಿಡುವ ಕಥಾಹಂದರ ಹೊಂದಿದೆ ಎಂದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಲೇಖಕರು ಭಾಗಿಯಾಗಿದ್ದರು.

Exit mobile version