Site icon Vistara News

Chamarajanagar News | ತಾಯಿಯಿಂದ ಬೇರ್ಪಟ್ಟು ಪುರಾಣಿಪೋಡಿ ಶಾಲೆಗೆ ಬಂದ ಪುಟಾಣಿ ಆನೆ!

Chamarajanagar News

ಚಾಮರಾಜನಗರ: ಯಳಂದೂರು ತಾಲೂಕಿನ (Chamarajanagar News) ಬಿಆರ್‌ಟಿ ಅರಣ್ಯ ಪ್ರದೇಶದ ಪುರಾಣಿಪೋಡಿಯ ಶಾಲೆಗೆ ಪುಟಾಣಿ ಆನೆಯೊಂದು ತಾಯಿಯಿಂದ ಬೇರ್ಪಟ್ಟು ಬಂದಿದೆ. ಈ ಪುಟಾಣಿ ಆನೆಯ ಜತೆ ಶಾಲೆಯ ಪುಟಾಣಿಗಳು ಆಟವಾಡಿ ಖುಷಿಯ ಸಮಯ ಕಳೆದಿದ್ದಾರೆ.

ಪುರಾಣಿಪೋಡಿನ ಆಶ್ರಮ ಶಾಲೆಯಲ್ಲಿ ಮರಿ ಆನೆ ಮಕ್ಕಳೊಂದಿಗೆ ಹಾಗೂ ಅಲ್ಲಿಯ ನಿವಾಸಿಗಳೊಂದಿಗೆ ಆಟವಾಡಿದೆ. ಮರಿಯಾನೆಗೆ ಆಟವಾಡಿಸಿ ಅದಕ್ಕೆ ಹಾಲು, ಹಣ್ಣು ನೀಡಿ ಸ್ಥಳೀಯರು ಜೋಪಾನ ಮಾಡಿದ್ದಾರೆ. ಅಲ್ಲಿಯ ನಿವಾಸಿಗಳು ಆನೆ ಜತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ | ಮಹಾರಾಷ್ಟ್ರದಿಂದ ರಕ್ಷಣೆ ಮಾಡಿ ತರಲಾಗಿದ್ದ ಸುಂದರ್‌ ಆನೆ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾವು

ಪುಟಾಣಿ ಆನೆಯು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮಕ್ಕಳ ಜತೆ ಮಕ್ಕಳಾಗಿ ಬೆರೆತಿದೆ. ಇದೀಗ ಈ ವಿಡಿಯೊ ವೈರಲ್‌ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರಿಯಾನೆ ಅನ್ನು ತಾಯಿ ಆನೆ ಜತೆ ಸೇರಿಸಿದ್ದಾರೆ.

Exit mobile version