Site icon Vistara News

ಡಾ. ಸುಧಾಕರ್​ಗೆ ಸಿಗಲಿದೆಯಾ ಆರೋಗ್ಯ ಖಾತೆ?; ಗೆದ್ದ ಕಾಂಗ್ರೆಸ್​​ನಲ್ಲಿ ಶುರುವಾಗಿದೆ ಹೀಗೊಂದು ಲೆಕ್ಕಾಚಾರ!

Chintamani Congress MLA Dr Sudhakar Will get health ministry Says Source

#image_title

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ (Chikkaballapur Assembly Constituency) ಬಿಜೆಪಿ ಅಭ್ಯರ್ಥಿ, ಆರೋಗ್ಯ ಸಚಿವರಾಗಿದ್ದ ಡಾ. ಕೆ.ಸುಧಾಕರ್​ ಸೋತಿದ್ದಾರೆ. ಇವರನ್ನು ಸೋಲಿಸಿ, ಗೆಲುವಿನ ನಗು ಬೀರಿದ್ದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪ್ರದೀಪ್ ಈಶ್ವರ್​. ಪ್ರದೀಪ್ ಈಶ್ವರ್​ ಒಬ್ಬ ಡಮ್ಮಿ ಅಭ್ಯರ್ಥಿ ಎಂದೇ ಚರ್ಚೆ ನಡೆಯುತ್ತಿತ್ತು. ಆದರೆ ಫಲಿತಾಂಶ ಹೊರಬಿದ್ದಾಗ ಲೆಕ್ಕಾಚಾರ ಉಲ್ಟಾ ಆಗಿತ್ತು. ಪ್ರದೀಪ್ ಈಶ್ವರ್​ ಗೆದ್ದಿದ್ದರು. ಬಿಜೆಪಿ ಪ್ರಭಾವಿ ನಾಯಕ ಮತ್ತು ಪ್ರಮುಖವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ನಿಭಾಯಿಸುತ್ತಿದ್ದ ಸುಧಾಕರ್ ಸೋಲು ನಿಜಕ್ಕೂ ಅಚ್ಚರಿಯನ್ನೇ ತಂದಿದೆ.

ಈಗ ಕಾಂಗ್ರೆಸ್ ಬಹುಮತ ಗಳಿಸಿದ ಬೆನ್ನಲ್ಲೇ ಅಲ್ಲಿ ಸಚಿವ ಸ್ಥಾನ ಯಾರ್ಯಾರಿಗೆಲ್ಲ ಸಿಗಲಿದೆ ಎಂಬ ಬಗ್ಗೆ ಚರ್ಚೆಯೂ ಶುರುವಾಗಿದೆ. ಆ ಮಾತುಕತೆಯಲ್ಲೀಗ ಕೇಳಿಬರುತ್ತಿರುವುದು ಇದೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಡಾ. ಎಂ.ಸಿ.ಸುಧಾಕರ್ ಹೆಸರು. ಡಾ. ಎಂ.ಸಿ.ಸುಧಾಕರ್ ಅವರು ಚಿಂತಾಮಣಿಯಲ್ಲಿ ಭಾರಿ ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ಜೆಡಿಎಸ್​ನಿಂದ ಜೆ.ಕೆ.ಕೃಷ್ಣಾರೆಡ್ಡಿ ಮತ್ತು ಬಿಜೆಪಿಯಿಂದ ಜಿ.ಎನ್.ವೇಣುಗೋಪಾಲ ಅವರು ಸ್ಪರ್ಧಿಸಿದ್ದರು. ಇವರಿಬ್ಬರನ್ನೂ ಸುಧಾಕರ್ ಸೋಲಿಸಿದ್ದಾರೆ.

ಇದನ್ನೂ ಓದಿ: Chikkaballapur Election Results : ಚಿಕ್ಕಬಳ್ಳಾಪುರದಲ್ಲಿ ಡಾ. ಕೆ ಸುಧಾಕರ್‌ರನ್ನು ಹೀನಾಯವಾಗಿ ಸೋಲಿಸಿದ ಪ್ರದೀಪ್‌ ಈಶ್ವರ್‌

ಡಾ. ಕೆ.ಸುಧಾಕರ್​ರನ್ನು ಸೋಲಿಸುವಲ್ಲಿ ಈ ಡಾ. ಎಂ.ಸಿ.ಸುಧಾಕರ್​ ಅವರು ತುಂಬ ಮಹತ್ವದ ಪಾತ್ರ ವಹಿಸಿದ್ದಾರೆ. ಇವರಿಗೆ ಈ ಸಲ ಸಂಪುಟ ಸ್ಥಾನದಲ್ಲಿ ಸಚಿವ ಸ್ಥಾನ ಪಕ್ಕಾ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಅದರಲ್ಲೂ ಕೆ.ಸುಧಾಕರ್​ ನಿಭಾಯಿಸುತ್ತಿದ್ದ ಆರೋಗ್ಯ ಖಾತೆಯ ಜವಾಬ್ದಾರಿ ಇವರಿಗೆ ಲಭಿಸಲಿದೆ ಎಂದು ಹೇಳಲಾಗಿದೆ. ಇನ್ನು ಈ ಡಾ. ಎಂ.ಸಿ.ಸುಧಾಕರ್ ಅವರು ದಂತ ಚಿಕಿತ್ಸಕ ವ್ಯದ್ಯರಾಗಿದ್ದವರು. ಸುಧಾಕರ್ ಮೂಲತಃ ಕಾಂಗ್ರೆಸ್​ನವರೇ ಆಗಿದ್ದು, 2 ಬಾರಿ ಈ ಪಕ್ಷದಿಂದಲೇ ಅಭ್ಯರ್ಥಿಯಾಗಿದ್ದರು. 2013 ಮತ್ತು 2018ನೇ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಈ ಸಲ ಮತ್ತೆ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಬಹಳ ಮುಖ್ಯವಾಗಿ ಅವರು ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.

Exit mobile version