Site icon Vistara News

Manipur Violence : ಬೆಂಗಳೂರಿನಲ್ಲಿ ಕ್ರೈಸ್ತರಿಂದ ಶಾಂತಿಯುತ ಪ್ರತಿಭಟನೆ

protest

ಬೆಂಗಳೂರು: ಗಲಭೆ ಪೀಡಿತ ಮಣಿಪುರದ ನಿರಾಶ್ರಿತ ಜನರಿಗೆ ಬೆಂಬಲ ಸೂಚಿಸಿ, ಅಲ್ಲಿನ ಹಿಂಸೆ ಕೊನೆಗೊಳಿಸಿ ಶಾಂತಿ ಮರುಸ್ಥಾಪಿಸಬೇಕೆಂದು ಕೋರಿ ಮಂಡ್ಯ ಧರ್ಮಪ್ರಾಂತ್ಯದ ನೇತೃತ್ವದಲ್ಲಿ ನಗರದ ವಿವಿಧ ಕ್ರೈಸ್ತ ಸಭೆಗಳು ಜತೆಯಾಗಿ ಸೇರಿಕೊಂಡು ಭಾನುವಾರ ನಗರದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಿದವು.

ಟಿ.ಸಿ ಪಾಳ್ಯ ಡಾನ್ ಬಾಸ್ಕೋ ಕಾಲೇಜು ಮೈದಾನದಲ್ಲಿ ನಡೆದ ಪ್ರತಿಭಟನೆಯನ್ನು ಮಂಡ್ಯ ಧರ್ಮಪ್ರಾಂತ್ಯದ ಬಿಷಪ್ ಮಾರ್ ಸೆಬಾಸ್ಟ್ಯನ್ ಎಡಯಂತ್ರತ್ ಉದ್ಘಾಟಿಸಿದರು.

ಮಾಜಿ ಸಂಸದ ರಾಜೀವ್ ಗೌಡ, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಿ.ಕೆ. ಮೋಹನ್ ಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣ ಸ್ವಾಮಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ವೇಳೆ ಮಣಿಪುರದ ನಿರಾಶ್ರಿತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರತಿಭಟನೆಯ ಕೊನೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿ ಮೊಂಬತ್ತಿ ಬೆಳಗಿಸಿ ಭಾವೈಕ್ಯತೆ ಪ್ರದರ್ಶಿಸಿದರು. ಹಲವು ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : Manipur Violence: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸೆ, ಮೂವರ ಸಾವು

Exit mobile version