Site icon Vistara News

Dharwad News: ಯುವತಿ ಮೈಮೇಲೆ ನೋಟಿನ ಸುರಿಮಳೆಗೈದ ಕಾಂಗ್ರೆಸ್ ‌ಮುಖಂಡ

Congress leader pours note on young woman

#image_title

ಧಾರವಾಡ: ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವತಿ ಮೈಮೇಲೆ ಕಾಂಗ್ರೆಸ್ ‌ಮುಖಂಡರೊಬ್ಬರು ನೋಟಿನ ಸುರಿಮಳೆಗೈದಿದ್ದಾರೆ. ನಗರದ (Dharwad News) ಬಾರಾ ಇಮಾಮ್ ಗಲ್ಲಿಯಲ್ಲಿ‌ ನಡೆದ ಅರಿಶಿನ ಕಾರ್ಯಕ್ರಮದಲ್ಲಿ ಹಾಡೊಂದಕ್ಕೆ ನೃತ್ಯ ಮಾಡುತ್ತಿದ್ದ ಯುವತಿ ಮೇಲೆ ನೋಟುಗಳನ್ನು ಎಸೆಯಲಾಗಿದೆ.

ಫಯಾಜ್ ಬಸ್ತವಾಡ ಮುತವಲ್ಲಿ ಎಂಬುವವರ ಮನೆಯಲ್ಲಿ ಕನ್ನಡ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ಯುವತಿ ಮೈಮೇಲೆ ಕೆಪಿಸಿಸಿ ಸದಸ್ಯ ಶಿವಶಂಕರ್ ಹಂಪಣ್ಣವರ ಅವರು ನೋಟಿನ ಸುರಿಮಳೆಗೈದಿದ್ದಾರೆ. ಮಾಜಿ ಸಚಿವ ವಿನಯ್ ‌ಕುಲಕರ್ಣಿ ಆಪ್ತ ಬಳಗದಲ್ಲಿ ಶಿವಶಂಕರ್ ಗುರುತಿಸಿಕೊಂಡಿದ್ದಾರೆ. ಹಣ ತೂರಿದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಮಾಜಿ ಸಚಿವ ವಿನಯ್ ‌ಕುಲಕರ್ಣಿ ಜತೆಗೆ ಶಿವಶಂಕರ್

ಇದನ್ನೂ ಓದಿ | Fire Accident: ಅರಣ್ಯಕ್ಕೆ ಕೊಳ್ಳಿ ಇಟ್ಟ ದುಷ್ಕರ್ಮಿಯ ಬಂಧನ; ಮತ್ತಿಬ್ಬರಿಗಾಗಿ ಪೊಲೀಸರ ಹುಡುಕಾಟ

Exit mobile version