Site icon Vistara News

Vistara News Launch | ಮಂಗಳೂರಿನಲ್ಲಿ ವಿಸ್ತಾರ ನ್ಯೂಸ್‌ ಕನ್ನಡ ಸಂಭ್ರಮ

Vistara News Launch

ಮಂಗಳೂರು: ನಗರದ ಕದ್ರಿ ಪಾರ್ಕ್​ನಲ್ಲಿ ಕನ್ನಡ ಸಂಭ್ರಮ ಕಾರ್ಯಕ್ರಮ (Vistara News Launch) ಸೋಮವಾರ ಅದ್ಧೂರಿಯಾಗಿ ನೆರವೇರಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಾ, ಯಾವುದೇ ಒತ್ತಡಕ್ಕೆ ಒಳಗಾಗದೆ ವಿಸ್ತಾರ ನ್ಯೂಸ್ ಕಾರ್ಯ ನಿರ್ವಹಿಸಲಿ. ರಾಜಕೀಯ ಪಕ್ಷಪಾತವಿಲ್ಲದೆ, ನಿಖರ ಹಾಗೂ ಜನಪರವಾಗಿ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಜನಪ್ರಿಯವಾಗಿ ವಿಸ್ತಾರ ವಾಹಿನಿ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.

ಸುಗಮ ಸಂಗೀತದೊಂದಿಗೆ ಆರಂಭಗೊಂಡ ಕನ್ನಡ ಸಂಭ್ರಮವು ಮ್ಯಾಜಿಕ್ ಶೋದೊಂದಿಗೆ ಅಂತ್ಯಗೊಂಡಿತು. ವಿಶೇಷವಾಗಿ ಪರೀಕ್ಷಿತ್​ ನೆಲ್ಯಾಡಿ ಅವರಿಂದ ಸ್ಟೆನ್ಸಿಲ್​ ಆರ್ಟ್​ನಲ್ಲಿ ಮೂಡಿ ಬಂದ ವಿಸ್ತಾರ ಚಾನೆಲ್​ನ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರ ಭಾವಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅದೇ ರೀತಿ ಯೋಗ ಪ್ರದರ್ಶನ ಹಾಗೂ ನೃತ್ಯ ಕಾರ್ಯಕ್ರಮ ನೋಡುಗರ ಗಮನ ಸೆಳೆದವು.

ಇದನ್ನೂ ಓದಿ | Vistara News Launch |‌ ಮಾಧ್ಯಮಗಳು ವಿಶ್ವಾಸಾರ್ಹತೆ ಉಳಿಸಿಕೊಂಡು ಜನಪರ ಕೆಲಸ ಮಾಡಲಿ: ಜಗದೀಶ್‌ ಶೆಟ್ಟರ್

Exit mobile version