Site icon Vistara News

Chandru Death | ರೇಣುಕಾಚಾರ್ಯಗೆ ಸಾಂತ್ವನ ಹೇಳಿದ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ

ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್‌ ಅವರ ಪುತ್ರ ಚಂದ್ರಶೇಖರ್ ಸಾವಿನಿಂದ (Chandru Death) ಕುಟುಂಬಸ್ಥರು ಕಂಗಾಲಾಗಿದ್ದಾರೆ. ರೇಣುಕಾಚಾರ್ಯರ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗಮಿಸಿ ಸಾಂತ್ವನ ಹೇಳಿದರು.

ರೇಣುಕಾಚಾರ್ಯರ ಹೊನ್ನಾಳಿಯ ನಿವಾಸಕ್ಕೆ ಆಗಮಿಸಿದ ವಿಜಯೇಂದ್ರ ಜತೆಗೆ ಕೆಲ ಕಾಲ ಮಾತನಾಡಿದರು. ಚಂದ್ರು ಕಾಣೆಯಾದ ದಿನದಿಂದ ಹಿಡಿದು ಪ್ರತಿಯೊಂದು ಮಾಹಿತಿಯನ್ನು ಹಂಚಿಕೊಂಡರು. ಚಂದ್ರು ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಹೊಂದಿದ್ದನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಣವಾಗಿದ್ದ ವಿಡಿಯೊವನ್ನು ವಿಜಯೇಂದ್ರಗೆ ತೋರಿಸಿ ನೆನಪು ಮಾಡಿಕೊಂಡರು.

ಇದನ್ನೂ ಓದಿ | Twitter | ದಯವಿಟ್ಟು ಕಚೇರಿಗೆ ಬನ್ನಿ, ಕೆಲ ಉದ್ಯೋಗಿಗಳಿಗೆ ಮಸ್ಕ್‌ ಯೂ ಟರ್ನ್

Exit mobile version