Site icon Vistara News

Death News: ಪ್ರಗತಿಪರ ರೈತ, ಶತಾಯುಷಿ ವೆಂಕಟರಮಣ ಸೀತಾರಾಮ ಹೆಗಡೆ ಇನ್ನಿಲ್ಲ

Centenarian Venkataramana Sitarama Hegde passed away

ಶಿರಸಿ: ಪ್ರಗತಿಪರ ರೈತ (Progressive farmer), ಮಾಲ್ಕಿ ಭೂಮಿಯಲ್ಲಿ ಹಸಿರು (Green) ಬೆಳಸಿದ ತಾಲೂಕಿನ ಸಾಲೇಕೊಪ್ಪದ ಶತಾಯುಷಿ ವೆಂಕಟರಮಣ ಸೀತಾರಾಮ ಹೆಗಡೆ (ಪಟೇಲರಮನೆ) ಬುಧವಾರ ನಿಧನರಾದರು. (Death News)

ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬ್ರಿಟೀಷ್ ಕಾಲದ ಪೊಲೀಸ್ ಪಟೇಲರೂ ಆಗಿದ್ದರು. ಪಟೇಲ್ ಅಜ್ಜ ಎಂದೇ ಹೆಸರಾಗಿದ್ದ ವೆಂಕಟರಮಣ ಹೆಗಡೆ ಅವರ‌ನ್ನು ಈ ಹಿಂದೆ ಕೃಷಿ ಜಯಂತಿ ಸಂದರ್ಭದಲ್ಲಿ ಸ್ವರ್ಣವಲ್ಲೀ ಶ್ರೀಗಳು ಅತ್ಯುತ್ತಮ ಬೆಟ್ಟ‌ ನಿರ್ವಹಣಾ‌ ಪ್ರಶಸ್ತಿ ನೀಡಿ ಗೌರವಿಸಿದ್ದರು. ಬಿಸಲಕೊಪ್ಪ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಕಾರ್ಯ ಮಾಡಿದ್ದ ಇವರು ರಂಗಭೂಮಿ ತಜ್ಞ ಮಾಸ್ಟರ್ ಹಿರಣ್ಣಯ್ಯ, ಹಿರಿಯ ಪತ್ರಕರ್ತರಾದ ಗರುಡನಗಿರಿ ನಾಗರಾಜ್, ಸಿ ಸೀತಾರಾಮ್ ಸೇರಿದಂತೆ ಅನೇಕ ಸಾಧಕರ ಆಪ್ತರಾಗಿದ್ದರು.

ಮೃತರು ಇಬ್ಬರು‌ ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

Exit mobile version