Site icon Vistara News

Death News: ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಅನುಯಾಯಿ ಕಲ್ಲೂರು ನಾರಾಯಣಪ್ಪ ಗೌಡ ನಿಧನ

Kallur Narayanappa Gowda ripponpet

#image_title

ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದ ಸಮಾಜವಾದಿ ಹೋರಾಟಗಾರ (socialist activist) ಶಾಂತವೇರಿ ಗೋಪಾಲಗೌಡರ ಅನುಯಾಯಿ ನಾರಾಯಣಪ್ಪ ಗೌಡ (94) ಬುಧವಾರ ನಿಧನರಾಗಿದ್ದಾರೆ.

ಸರಳ ಸಜ್ಜನಿಕೆ ಹಾಗೂ ಪ್ರಾಮಾಣಿಕತೆಯ ಮೂಲಕ ಜನಾನುರಾಗಿಯಾದ್ದ ಕಲ್ಲೂರು ನಾರಾಯಣಪ್ಪ ಗೌಡ ಅವರು ಕೆಲವು ದಶಕಗಳ ಹಿಂದೆ ಹೆದ್ದಾರಿ ಪುರದಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ಸ್ಥಾಪಿಸಿ ಅದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಲ್ಲೂರು ಹಾಗೂ ಹೆದ್ದಾರಿಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು. ಮೃತರಿಗೆ ಪತ್ನಿ ಹಾಗೂ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರದ ಉಪನ್ಯಾಸಕ ಕೆಎನ್ ಶಂಕ್ರಪ್ಪ ಸೇರಿದಂತೆ ಮೂವರು ಪುತ್ರರು ಇದ್ದಾರೆ.

ಇದನ್ನೂ ಓದಿ: Sonu Nigam: ಸೋನು ನಿಗಮ್‌ ತಂದೆಯ ಲಾಕರ್‌ನಿಂದ 72 ಲಕ್ಷ ರೂ. ಕಳ್ಳತನ: ಕದ್ದೋರು ಯಾರು?

ಸಂತಾಪ

ಕಲ್ಲೂರು ನಾರಾಯಣಪ್ಪ ಗೌಡರ ನಿಧನಕ್ಕೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಮಂತ್ರಿ ಕಿಮ್ಮನೆ ರತ್ನಾಕರ್, ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ. ಬಿ.ಲಕ್ಷ್ಮಣಗೌಡ. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ ಮಂಜುನಾಥ್. ಕ್ಷೇತ್ರ ಶಿಕ್ಷಣ ಸಂಯೋಜಕ ಎನ್.ಜಿ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Vastu Tips : ಕಚೇರಿಯ ವಾಸ್ತು ಹೀಗಿದ್ದರೆ ಯಶಸ್ಸು ಖಚಿತವಂತೆ!

ಗಜಾನನ ಮೋಟಾರ್ ಕಂಪನಿಯ ಚಾಲಕ ಸೀನಪ್ಪ ನಿಧನ

ಸಾಗರ: ಇಲ್ಲಿನ ಜೋಗ ರಸ್ತೆ ನಿವಾಸಿ ಸೀನಪ್ಪ (84) ನಿಧನರಾಗಿದ್ದಾರೆ. ಗಜಾನನ ಮೋಟಾರ್ ಕಂಪನಿಯಲ್ಲಿ ಸುಮಾರು ಆರು ದಶಕಗಳ ಕಾಲ ಚಾಲಕರಾಗಿದ್ದ ಅವರು ಜೋಗ- ಮಂಗಳೂರು ಬಸ್ಸಿನ ಚಾಲಕರಾಗಿ ಜನಪ್ರಿಯತೆ ಗಳಿಸಿದ್ದರು. ಬೆಲೆ ಬಾಳುವ ವಸ್ತುಗಳನ್ನು ಬಹಳ ಪ್ರಾಮಾಣಿಕವಾಗಿ ತಲುಪಿಸಿ ಜನ ಮೆಚ್ಚುಗೆ ಗಳಿಸಿದ್ದರು.

ಇವರಿಗೆ ಪತ್ನಿ, ನಾಲ್ವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಇದ್ದಾರೆ. ಮೃತರ ಅಂತ್ಯ ಸಂಸ್ಕಾರ ಬುಧವಾರ (ಮಾ.22) ಮಧ್ಯಾಹ್ನ ಶ್ರೀ ಮಾರಿಕಾಂಬಾ ಹಿಂದೂ ರುದ್ರ ಭೂಮಿಯಲ್ಲಿ ನಡೆಯಿತು.

ಇದನ್ನೂ ಓದಿ: Viral Video: ಭೂಕಂಪನದ ಮಧ್ಯೆಯೇ ಗರ್ಭಿಣಿಗೆ ಸಿಸೇರಿಯನ್​ ಮಾಡಿದ ಕಾಶ್ಮೀರಿ ವೈದ್ಯರು; ವೃತ್ತಿ ಬದ್ಧತೆಗೆ ನಮನ ಎಂದ ಜನರು

Exit mobile version