Site icon Vistara News

ಧಾರವಾಡ ಭೀಕರ ಅಪಘಾತ ; ಓರ್ವ ಬಾಲಕಿ ದುರ್ಮರಣ

ಧಾರವಾಡ: ಒಂಭತ್ತು ಜನರ ಸಾವಿಗೆ ಕಾರಣವಾದ ಬಾಡ ಗ್ರಾಮದ ಬಳಿ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ 14 ವಷದ ಬಾಲಕಿಯೂ ಇದ್ದಾಳೆ. ಈ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೆ 7 ಜನ ಸಾವನ್ನಪ್ಪಿದ್ದರು. ನಂತರ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಇಬ್ಬರು ಚೆನ್ನವ್ವ ಹಾಗೂ ಮಧುಶ್ರೀ.ಇದೀಗ ಮೃತಪಟ್ಟ ಬಾಲಕಿಯನ್ನು ಅನನ್ಯ ಮಲ್ಲಪ್ಪ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ | ಕ್ರೂಸರ್‌ ಮರಕ್ಕೆ ಡಿಕ್ಕಿ: ಮದುವೆ ನಿಶ್ಚಿತಾರ್ಥ ಮುಗಿಸಿ ಹೊರಟ 7 ಮಂದಿ ದುರ್ಮರಣ

ಬಾಲಕಿ ದೊಡವಾಡ ಗ್ರಾಮದ ನಿವಾಸಿಯಾಗಿದ್ದರು. ಈಕೆ ಪ್ರತಿಭಾವಂತ ಬಾಲಿಕಿ. ಕಳೆದ ವಾರ ದೊಡವಾಡ ಗ್ರಾಮದಲ್ಲಿ ನಡೆದ ಗ್ರಾಮ ದೇವಿಯರ ಜಾತ್ರಾ ಮಹೋತ್ಸವದಲ್ಲಿ ಯೋಗಾಸನ ಮಾಡುವ ಮೂಲಕ ಗ್ರಾಮಸ್ಥರ ಕಣ್ಮನ ಸೆಳೆದಿದ್ದಳು. ಈಕೆಯನ್ನು ಕಳೆದುಕೊಂಡ ದುಃಖದಲ್ಲಿ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ | ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ಇಬ್ಬರ ಸಾವು

Exit mobile version