Site icon Vistara News

ಧಾರವಾಡದಲ್ಲಿ ಅಪಘಾತ, ಐವರಿಗೆ ಗಂಭೀರ ಗಾಯ

dharwad accident

ಧಾರವಾಡ: ನಗರದ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ.

ಧಾರವಾಡದ ಬೆಳಗಾವಿ ರಸ್ತೆಯ ಪೆಪ್ಸಿ ಪ್ಯಾಕ್ಟರಿ ಬಳಿ ನಿನ್ನೆ ತಡರಾತ್ರಿ ನಡೆದ ಘಟನೆಯಲ್ಲಿ ಮರಕ್ಕೆ ಕಾರು ಗುದ್ದಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿದ್ದ ಕಾರು ಅಪಘಾತಕ್ಕೊಳಗಾಗಿದೆ. ಕಾರಿನಲ್ಲಿದ್ದ ಐವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ವೀಣಾ ಸಾಣಿಕೊಪ್ಪ (45), ಮಹಾನಂದ ಕೊಣ್ಣೂರ (73), ಚಂದ್ರಕಾಂತ ಕೊಣ್ಣೂರ (75), ಯಶ್ ಸಾಣಿಕೊಪ್ಪ(18) ಹಾಗೂ ಸತೀಶ್ ಸಾಣಿಕೊಪ್ಪ(50) ಗಾಯಾಳುಗಳು. ಗಾಯಾಳುಗಳೆಲ್ಲರೂ ಬೆಳಗಾವಿ ಮೂಲದವರು ಎಂದು ತಿಳಿದುಬಂದಿದೆ. ಮಹಾನಂದರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Series Accident | ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸರಣಿ ಅಪಘಾತ; ಒಬ್ಬರು ಸಾವು, 9 ಮಂದಿಗೆ ಗಂಭೀರ ಗಾಯ

Exit mobile version