Site icon Vistara News

ಹಿಮಾಲಯಕ್ಕೆ ಒಬ್ಬಂಟಿಯಾಗಿ ಚಾರಣಕ್ಕೆ ತೆರಳಿದ್ದ ವೈದ್ಯ ನಾಪತ್ತೆ

ಚಾರಣಕ್ಕೆ ತೆರಳಿದ್ದ ವೈದ್ಯ ನಾಪತ್ತೆ

ಬೆಂಗಳೂರು : ಹಿಮಾಲಯಕ್ಕೆ ಒಬ್ಬಂಟಿಯಾಗಿ ಚಾರಣಕ್ಕೆ ತೆರಳಿದ್ದ ವೈದ್ಯ ಚಂದ್ರಮೋಹನ್‌ ನಾಪತ್ತೆಯಾಗಿದ್ದಾರೆ. ಮೇ 3ರಂದು ಬೆಂಗಳೂರಿನಿಂದ ನೇಪಾಳದ ಕಠ್ಮಂಡುವಿಗೆ ಅವರು ಬೆಳೆಸಿದ್ದಾರೆ.

ಇದನ್ನೂ ಓದಿ | ಹುಬ್ಬಳ್ಳಿಯ ಕಿಮ್ಸ್‌ನಲ್ಲೆ ಮಗು ಪ್ರತ್ಯಕ್ಷ: ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ವಸಂತನಗರ ನಿವಾಸಿಯಾದ ವೈದ್ಯ ಚಂದ್ರಮೋಹನ್, ಮೇ 20ರಂದು ನೇಪಾಳದಿಂದ ಕೊನೆಯ ಗ್ರೂಪ್‌ ಫೋಟೊ ಕಳಿಸಿದ್ದ. ನಂತರ ವೈದ್ಯರ ಮೊಬೈಲ್ ಸ್ವಿಚ್‌ ಆಫ್‌ ಆಗಿತ್ತು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಸದ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವೈದ್ಯರ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ | ಸೈಕ್ಲಿಂಗ್ ಎಂದು ಹೋಗಿ ನಾಪತ್ತೆಯಾಗಿದ್ದ ಬಾಲಕರನ್ನ ಕರೆತಂದ ಪೊಲೀಸರು

Exit mobile version