Site icon Vistara News

Varthur Prakash | ಯಾವುದೇ ಕಾರಣಕ್ಕೂ ಕೋಲಾರ ಸ್ಪರ್ಧೆಯಿಂದ ಹಿಂದೆ ಸರೀಬೇಡಿ: ಸಿದ್ದರಾಮಯ್ಯಗೆ ವರ್ತೂರು ಹೀಗೆ ಹೇಳಿದ್ಯಾಕೆ?

siddaramaih varthur

ಕೋಲಾರ: ಸಿದ್ದರಾಮಯ್ಯನವರೇ ಯಾವ ಕಾರಣಕ್ಕೂ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಡಿ… ಹೈಕಮಾಂಡ್‌ ಒಪ್ಪಲಿಲ್ಲ. ಮನೆ ದೇವರು ಹೂವು ಕೊಡಲಿಲ್ಲ ಎಂಬ ಯಾವುದೇ ನೆಪ ಹೇಳಬೇಡಿ.. ನೀವು ಇಲ್ಲಿಂದಲೇ ಸ್ಪರ್ಧೆ ಮಾಡಬೇಕು: ಹೀಗೆಂದು ಕೋಲಾರದ ಬಿಜೆಪಿ ನಾಯಕ ವರ್ತೂರು ಪ್ರಕಾಶ್‌ (Varthur Prakash) ಹೇಳಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೊಟ್ಟರೆ ವರ್ತೂರು ಪ್ರಕಾಶ್‌ ಅವರೂ ಅಭ್ಯರ್ಥಿಯಾಗುವ ಅವಕಾಶ ಇದೆ. ಸದ್ಯದ ಮಟ್ಟಿಗೆ ಚಾಲ್ತಿಯಲ್ಲಿರುವ ಹೆಸರೂ ಅವರದೇ.. ಹಾಗಿದ್ದರೂ ಬನ್ನಿ ಬನ್ನಿ ಅಂತ ಕರೆಯುತ್ತಿರುವುದು ಯಾಕೆ ಎಂಬ ಕುತೂಹಲವೇ?

ವರ್ತೂರು ಅವರು ಸಿದ್ದರಾಮಯ್ಯ ಅವರನ್ನು ಬನ್ನಿ ಬನ್ನಿ ಎಂದು ಕರೆಯುತ್ತಿರುವುದು ಯಾಕೆ ಎಂದರೆ ʻನಿಮ್ಮನ್ನು ಸೋಲಿಸಿಯೇ ಸೋಲಿಸ್ತೀವಿʼ ಅಂತ ಸವಾಲು ಹಾಕುವುದಕ್ಕಾಗಿ!

ಹೌದು, ಸಿದ್ದರಾಮಯ್ಯ ಅವರು ತಾನು ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ ಮೇಲೆ ಕ್ಷೇತ್ರದ ಬಗ್ಗೆ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಗೆಲ್ಲುವುದಾದರೆ ಹೇಗೆ? ಸೋಲಿಸಲು ಏನೆಲ್ಲ ಈಕ್ವೇಷನ್‌ಗಳಿವೆ ಎಂದೆಲ್ಲ ಚರ್ಚೆಯ ಸಂಗತಿ. ವರ್ತೂರು ಅವರ ಮಾತುಗಳ ಒಳಾರ್ಥಗಳೂ ಅದೇ… ಸಿದ್ದರಾಮಯ್ಯನವರೇ ನೀವು ಬನ್ನಿ.. ನಿಮ್ಮನ್ನು ಎಲ್ಲರೂ ಸೇರಿ ಸೋಲಿಸಿ ಕಳಿಸ್ತೀವಿ ಅಂತ!

ʻʻಸಿದ್ದರಾಮಯ್ಯನವರೇ ಕೋಲಾರ ಕ್ಷೇತ್ರಕ್ಕೆ ಬೆಂಕಿ ಇಟ್ಟಿದ್ದೀರ. ಯಾವುದೇ ಕಾರಣಕ್ಕೂ ಕೋಲಾರ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಬೇಡಿ. ರಾಜ್ಯದಲ್ಲಿ ಎಲ್ಲಾ ಜನಾಂಗಗಳ ನಾಯಕರನ್ನು ರಾಜಕೀಯವಾಗಿ ಮುಗಿಸಿದ್ದೀರಿ. ಕೋಲಾರ ಕ್ಷೇತ್ರದಲ್ಲಿ ಮತದಾರರು ಕಾಯ್ತಿದಾರೆ ನಿಮ್ಮನ್ನು ಮುಗಿಸಲುʼʼ ಎಂದಿದ್ದಾರೆ ವರ್ತೂರು ಪ್ರಕಾಶ್.

…ʻʻನೀವು ಹೈಕಮಾಂಡ್ ಒಪ್ಪಲಿಲ್ಲ, ಮನೆ ದೇವರು ಹೂ ಕೊಡಲಿಲ್ಲ ಅಂತ ನೆಪ ಹೇಳಿ ಕೋಲಾರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ. ಕುರುಬ ಜನಾಂಗ ನನ್ನ ಜೊತೆ ಇದೆ, ಬೆರಳೆಣಿಕೆಯಷ್ಟು ಜನ ಬಿಟ್ಟು ಉಳಿದ ಎಲ್ಲಾ ಕುರುಬ ಸಮುದಾಯದ ಜನ ನನ್ನನ್ನು ಬೆಂಬಲಿಸುತ್ತಾರೆʼʼ ಎನ್ನುವ ಮೂಲಕ ನೀವು ಸೋಲುವುದು ಖಂಡಿತ ಎಂದಿದ್ದಾರೆ.

ʻʻನಿಮ್ಮನ್ನು ಬೆಳೆಸಿದ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದೀರ, ಎ.ಕೃಷ್ಣಪ್ಪರನ್ನು ಮುಗಿಸಿದ್ದೀರ, ಮುಸ್ಲಿಂ ಜನಾಂಗದ ಸಿ.ಎಂ ಇಬ್ರಾಹಿಂರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದೀರ.
ಕೋಲಾರ ಕ್ಷೇತ್ರದಲ್ಲಿ ನೀವು ಸ್ಪರ್ಧೆ ಮಾಡಿದರೆ ಎಲ್ಲಾ ಜನಾಂಗಗಳ ನಾಯಕರೂ ನಿಮ್ಮನ್ನು ರಾಜಕೀಯವಾಗಿ ಮುಗಿಸಲು ಕೆಲಸ ಮಾಡುತ್ತಾರೆʼʼ ಎನ್ನುವುದು ವರ್ತೂರು ಮಾತು.

ಇದನ್ನೂ ಓದಿ | Varthur prakash : ಸಚಿವ ಶಿವರಾಮ ಹೆಬ್ಬಾರ್‌ ಒಂದೂವರೆ ಕೆಜಿ ನಾನ್‌ವೆಜ್‌ ತಿನ್ತಾರೆ ಅಂದ್ರು ವರ್ತೂರು ಪ್ರಕಾಶ್‌!

Exit mobile version