Site icon Vistara News

Drowned In River : ಕೃಷ್ಣಾ ನದಿಯಲ್ಲಿ ಕಾಲು ಜಾರಿ ಬಿದ್ದ ಯುವಕರು; ಒಬ್ಬ ನೀರುಪಾಲು, ಮತ್ತಿಬ್ಬರು ಪಾರು

Husen Drowned in krishna River

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹೊರ ವಲಯದ ಗಡ್ಡೆ ಸಮೀಪದ ಕೃಷ್ಣಾ ನದಿಯಲ್ಲಿ (Krishna River) ಮೂವರು ಯುವಕರು ಮುಳುಗಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡಲಾಗಿದ್ದರೆ (Drowned in river) ಮತ್ತೊಬ್ಬ ನೀರುಪಾಲಾಗಿದ್ದಾನೆ. ಬೆಳಗಾವಿ ನಗರದ ಗಾಂಧಿ ನಗರದ ನಿವಾಸಿ ಹುಸೇನ್ ಅರಕಟ್ಟೆ ನೀರುಪಾಲಾದವನು.

ಭಾನುವಾರ ಕುಟುಂಬ ಸಮೇತ ಗಡ್ಡೆಯ ಸಿರಾಜುದ್ದೌಲ ದರ್ಗಾಗೆ ತೆರಳಿದ್ದರು. ಸಂಜೆ ಮನೆಗೆ ತೆರಳುವ ಮುನ್ನ ನದಿ ದಡದಲ್ಲಿ ಹುಸೇನ್‌ ಸೇರಿ ಮೂವರು ಕುಳಿತಿದ್ದರು. ಈ ವೇಳೆ ಹುಸೇನ್ ಕಾಲು ಜಾರಿದ್ದು, ನೀರಿಗೆ ಬೀಳುವಾಗ ಇನ್ನಿಬ್ಬರ ಕೈ ಹಿಡಿದಿದ್ದ. ಹೀಗಾಗಿ ಮೂವರು ನೀರಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೂಡಲೇ ಸ್ಥಳೀಯರು ಸಹಾಯಕ್ಕೆ ಧಾವಿಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.

ಹುಸೇನ್‌ಗಾಗಿ ಶೋಧಕಾರ್ಯ ನಡೆಯುತ್ತಿದ್ದು, ಸ್ಥಳೀಯ ಮೀನುಗಾರರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕುಡಚಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version