Site icon Vistara News

Drowned in Water: ಜಲಾಶಯದಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರು ಪಾಲು

Drowned in Water Mundagoda

#image_title

ಮುಂಡಗೋಡ: ಜಲಾಶಯದಲ್ಲಿ ಈಜಲು ಹೋಗಿದ್ದ ವ್ಯಕ್ತಿಯೊಬ್ಬರು ನೀರಲ್ಲಿ ಮುಳುಗಿ (Drowned in Water) ಮೃತಪಟ್ಟ ಘಟನೆ ಮಂಗಳವಾರ (ಮಾ.28) ತಾಲೂಕಿನ ನ್ಯಾಸರ್ಗಿ ಜಲಾಶಯದಲ್ಲಿ ಜರುಗಿದೆ.

ನ್ಯಾಸರ್ಗಿ ಗ್ರಾಮದ ಲಕ್ಷ್ಮಣ ಭೀಮಣ್ಣ ಭೋವಿ (44) ಮೃತರು. ಮಂಗಳವಾರ ಮಧ್ಯಾಹ್ನ ಜಲಾಶಯಕ್ಕೆ ಈಜಲು ಇಳಿದಾಗ ಸುಸ್ತಾಗಿದ್ದರಿಂದ ನೀರಿನಲ್ಲಿ ಮುಳುಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಜಲಾಶಯದಲ್ಲಿ ಮೃತದೇಹದ ಹುಡುಕಾಟ ನಡೆಸಿದರು. ಆದರೆ, ಶವ ಪತ್ತೆಯಾಗದೇ ಇರುವ ಕಾರಣಕ್ಕೆ ಪಿಎಸ್‌ಐ ನಿಂಗಪ್ಪ ಜಕ್ಕಣ್ಣ ಅವರೇ ಜಲಾಶಯಕ್ಕೆ ಇಳಿದು ಶೋಧಿಸಿ, ಮೃತದೇಹವನ್ನು ಹೊರತೆಗೆದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Ponniyin Selvan 2 : ಮಾ.29ಕ್ಕೆ ಪೊನ್ನಿಯಿನ್‌ ಸೆಲ್ವನ್‌ 2 ಸಿನಿಮಾ ಟ್ರೈಲರ್‌ ಬಿಡುಗಡೆ; ಏನೆಲ್ಲ ನಿರೀಕ್ಷೆ?

Exit mobile version