Site icon Vistara News

Praveen Nettaru | ಜನಸಾಗರ ನಡುವೆ ಪ್ರವೀಣ್‌ ಅಂತ್ಯ ಸಂಸ್ಕಾರ, ಮುಗಿಲು ಮುಟ್ಟಿದ ಆಕ್ರಂದನ

Praveen Nettaru

ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಅಂತ್ಯ ಸಂಸ್ಕಾರ ಸ್ವಗ್ರಾಮ ಪುತ್ತೂರು ತಾಲೂಕಿನ‌ ನೆಟ್ಟಾರು ಗ್ರಾಮದಲ್ಲಿ ಬುಧವಾರ ಕುಟುಂಬಸ್ಥರು ಹಾಗೂ ಸಾವಿರಾರು ಮಂದಿ ಹಿಂದು ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿತು.‌

ನೆಟ್ಟಾರು ಗ್ರಾಮದ ಮನೆಯ ಬಳಿಯೇ ಬಿಲ್ಲವ ಸಂಪ್ರದಾಯದಂತೆ ಪ್ರವೀಣ್‌ ಅವರ ಅಂತಿಮ ವಿಧಿವಿಧಾನ ಕೈಗೊಳ್ಳಲಾಯಿತು. ಚಿತೆಗೆ ತಂದೆ ಶೇಖರ್‌ ಪೂಜಾರಿ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಗ್ರಾಮದಲ್ಲಿ ಹೊಸಮನೆ ಕಟ್ಟಲು ಪ್ರವೀಣ್‌ ಸಿದ್ಧತೆ ನಡೆಸಿದ್ದರು. ಹೀಗಾಗಿ ಅದೇ ಸ್ಥಳದಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಇದನ್ನೂ ಓದಿ | Praveen Nettaru | ಪ್ರವೀಣ್ ಹತ್ಯೆ ಖಂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

Exit mobile version