Site icon Vistara News

ನೆಚ್ಚಿನ ನಟನನ್ನು ಭೇಟಿಯಾಗಲು 400 ಕಿ.ಮೀ ಕಾಲ್ನಡಿಗೆಯಲ್ಲಿ ಹೊರಟ ಅಭಿಮಾನಿ!

Pawan kalyan fan

ಬಳ್ಳಾರಿ: ಸ್ಟಾರ್‌ ನಟರ ಅಭಿಮಾನಿಗಳು ಅವರನ್ನು ಭೇಟಿಯಾಗಲು ಹುಚ್ಚು ಪ್ರಯತ್ನಗಳನ್ನು ನಡೆಸುವುದು ಸಾಮಾನ್ಯ. ಇಲ್ಲಿಯ ಅಭಿಮಾನಿಯೊಬ್ಬರು ಮಾತ್ರ ಬರೋಬ್ಬರಿ 400 ಕೀಲೋ ಮೀಟರ್ ಪಾದಯಾತ್ರೆಯನ್ನೇ ಕೈಗೊಂಡಿದ್ದಾರೆ!

ಟಾಲಿವುಡ್‌ ಖ್ಯಾತ ನಟ, ಪವರಸ್ಟಾರ್ ಪವನ್‌ ಕಲ್ಯಾಣ್‌ ಭೇಟಿಗಾಗಿ ಬಳ್ಳಾರಿಯ ಲಾಲ ಕಮಾನ್ ನಿವಾಸಿ ಬಿ. ಚಂದ್ರಶೇಖರ್‌ ಎಂಬ ಅಭಿಮಾನಿ ಬಳ್ಳಾರಿಯಿಂದ ಹೈದ್ರಾಬಾದ್‌ವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಕಳೆದ ಸೋಮವಾರ ಪಾದಯಾತ್ರೆ ಆರಂಭಿಸಿರುವ ಚಂದ್ರಶೇಖರ್‌ ಹೈದರಾಬಾದ್‌ನ ಶಾದ್ ನಗರವನ್ನು ಭಾನುವಾರ ಸಂಜೆ ತಲುಪಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ತನ್ನ ನೆಚ್ಚಿನ ನಟ ಪವನಕಲ್ಯಾಣ್‌ ಅವರನ್ನು ಭೇಟಿಯಾಗಲು ಹಲವಾರು ಬಾರಿ ಪ್ರಯತ್ನಿಸಿದ್ದರೂ ಚಂದ್ರಶೇಖರ್‌ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಬಳ್ಳಾರಿಯಿಂದ ಹೈದ್ರಾಬಾದ್‌ವರೆಗೆ ಪಾದಯಾತ್ರೆ ಮೂಲಕ ತೆರಳಿದ್ದು, ಅಲ್ಲಿ ನಟ ಪವನ್‌ ಕಲ್ಯಾಣ್‌ ಹಾಗೂ ರಾಮ್‌ಚರಣ್‌ ತೇಜ ಅವರನ್ನು ಭೇಟಿಯಾಗುವ ಉದ್ದೇಶ ಹೊಂದಿದ್ದಾರೆ. ಅವರ ಜೀವನದ ಈ ಕನಸು ಈ ಬಾರಿಯಾದರೂ ಈಡೇರುತ್ತದೆಯೇ ಕಾದು ನೋಡಬೇಕು.

ಇದನ್ನೂ ಓದಿ | ಲೊಡ್ಡೆ ಸಿನಿಮಾ ಮಾಡಿ ಲಾಸ್‌ ಆದ ನಿರ್ಮಾಪಕ ವಂಚನೆ ಪ್ರಕರಣದಲ್ಲಿ ಅಂದರ್‌

Exit mobile version