Site icon Vistara News

ಹಿರಿಯ ಪತ್ರಕರ್ತ ಎಚ್.ಎಸ್.ವೃಷಭ ರಾಜುಗೆ ಕೆಯುಡಬ್ಲ್ಯುಜೆ ಸನ್ಮಾನ

ಪತ್ರಕರ್ತ

ಬೆಂಗಳೂರು: ಹಿರಿಯ ಪತ್ರಕರ್ತ, ಗುಲಾಬಿ ಪತ್ರಿಕೆಯ ಸಂಪಾದಕ ಎಂಬತ್ತೆರಡು ವಸಂತ ತುಂಬಿರುವ ಎಚ್.ಎಸ್.ವೃಷಭ ರಾಜು ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲ್ಯುಜೆ) ವತಿಯಿಂದ ಸನ್ಮಾನಿಸಿ, ಗೌರವಿಸಲಾಗಿದೆ.

ಕೆಯುಡಬ್ಲ್ಯುಜೆ ಹಮ್ಮಿಕೊಂಡಿರುವ “ಮನೆಯಂಗಳದಲ್ಲಿ ಮನದುಂಬಿ” ಕಾರ್ಯಕ್ರಮದ ಭಾಗವಾಗಿ ವೃಷಭ ರಾಜು ಅವರಿಗೆ ಜೆ.ಪಿ.ನಗರದ ನಿವಾಸದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸನ್ಮಾನಿಸಿದರು.

ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ದಿನದಿಂದ ಇಲ್ಲಿಯವರೆಗಿನ ಅನುಭವಗಳನ್ನು ಹಂಚಿಕೊಂಡ ವೃಷಭ ರಾಜು, ಲೆಟರ್‌ ಪ್ರೆಸ್‌ನಿಂದ ಕಂಪ್ಯೂಟರ್ ಯುಗದ ತನಕ ಪತ್ರಿಕೋದ್ಯಮ ಹೆಜ್ಜೆಗಳು, ಬದಲಾವಣೆಗಳ ಸಹಿತ ಕೆಲವು ಸಂಗತಿಗಳ ಬಗ್ಗೆ ನೆನಪಿಸಿಕೊಂಡರು. ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ದೇವರಾಜು ಹಾಜರಿದ್ದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಮಾಡುವ ಸಲುವಾಗಿ “ಮನೆಯಂಗಳದಲ್ಲಿ ಮನದುಂಬಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಗೌರವ ಸಲ್ಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಇದನ್ನೂ ಓದಿ | Amrit mahotsav | ಕೊಲ್ಹಾಪುರದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ ಚೀಮಾ ಸಾಹೇಬ್

Exit mobile version