Site icon Vistara News

Fire Accident: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಕುರಿಗಾಹಿ ಸಜೀವ ದಹನ

Shepherd burnt alive after fire breaks out in hut

Shepherd burnt alive after fire breaks out in hut

ಚಿಕ್ಕಬಳ್ಳಾಪುರ: ಗುಡಿಸಲಿಗೆ ಬೆಂಕಿ ಬಿದ್ದು ಕುರಿಗಾಹಿ ಜೀವಂತ ದಹನವಾಗಿರುವ (Fire Accident) ಘಟನೆ ಬಾಗೇಪಲ್ಲಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಜೂಲಪಾಳ್ಯ ಗ್ರಾಮ ಪಂಚಾಯತಿ ವೆಂಕಟಾಪುರ ಗ್ರಾಮದ ನರಸಿಂಹಪ್ಪ (50 ವರ್ಷ) ಮೃತ ದುರ್ದೈವಿ.

ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಕ್ಷಣಾರ್ಧದಲ್ಲಿಯೇ ಗುಡಿಸಲು ಧಗ ಧಗನೆ ಹೊತ್ತು ಉರಿದಿದೆ. ನರಸಿಂಹಪ್ಪ ಕುರಿ ಮೇಯಿಸಿಕೊಂಡು ಜೀವನ ನಡೆಸುತ್ತಿದ್ದರು. ಈ ಬೆಂಕಿ ಅವಘಡದಲ್ಲಿ ನರಸಿಂಹಪ್ಪ ಸೇರಿದಂತೆ ಜತೆಗೆ ಇದ್ದ ಐದು ಕುರಿಗಳು ಮೃತಪಟ್ಟಿವೆ.

ಇದನ್ನೂ ಓದಿ: Nanjangud Temple: ಶಿವರಾತ್ರಿಗೆ ನಂಜನಗೂಡು ನಂಜುಂಡೇಶ್ವರನಿಗೆ ಕೋಟಿ ರೂಪಾಯಿ ಮೀರಿದ ಕಾಣಿಕೆ

ಘಟನಾ ಸ್ಥಳಕ್ಕೆ ಚೇಳೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಟೆಕ್ಸ್‌ಟೈಲ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣ ಹೊರವಲಯದಲ್ಲಿ ಶನಿವಾರ ಬೆಳಗಿನ ಜಾವ ಶಾರ್ಟ್‌ ಸರ್ಕ್ಯೂಟ್ ಆಗಿ ಶ್ರೀ ಗಣೇಶ್ ಟೆಕ್ಸ್‌ಟೈಲ್‌ ಹೊತ್ತಿ ಉರಿದಿದೆ. 9 ಪಾವರ ಲೂಮ್ ಮಷಿನ್‌ಗಳು ಮತ್ತು ಕಚ್ಚಾ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version