Site icon Vistara News

Cows Death : ಹಾಸನದಲ್ಲಿ ಗೋವುಗಳಿಗೆ ಗುಂಡಿಕ್ಕಿ ಕೊಂದ ದುರುಳರು

Miscreants shoot cows in Hassan

ಹಾಸನ: ಎರಡು ಹಸುಗಳಿಗೆ (Cows Death) ಗುಂಡಿಕ್ಕಿ ಕೊಂದಿರುವ (Shoot Out) ಘಟನೆ ಹಾಸನದ ಬೇಲೂರು ತಾಲೂಕಿನ ಹಿರೇಹಸಡೆ ಗ್ರಾಮದಲ್ಲಿ (Hasana News) ನಡೆದಿದೆ. ಗ್ರಾಮದ ವಸಂತ್‌‌ಕುಮಾರ್, ಶಿವಮ್ಮ ಎಂಬುವವರಿಗೆ ಸೇರಿದ ಹಸುಗಳು ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದವು.

ವಸಂತ್‌ಕುಮಾರ್, ಶಿವಮ್ಮ ಸೇರಿ ಗೋವುಗಳಿಗಾಗಿ ಹುಡುಕಾಡಿದ್ದಾರೆ. ಮಂಗಳವಾರ ಐಬಿಸಿ ಎಸ್ಟೇಟ್‌ನಲ್ಲಿ ಗೋವುಗಳ ಮೃತದೇಹ ಪತ್ತೆಯಾಗಿವೆ. ಕಿರಾಕತರು ಎರಡು ಗಬ್ಬದ ಹಸುಗಳನ್ನು ಗುಂಡು ಹಾರಿಸಿ ಕೊಂದಿದ್ದಾರೆ.

ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Self Harming : ಹಾಸನದಲ್ಲಿ ನೇಣು ಬಿಗಿದುಕೊಂಡು ದ್ವಿತೀಯ ದರ್ಜೆ ಸಹಾಯಕ ಆತ್ಮಹತ್ಯೆ

ಚಿಕ್ಕಮಗಳೂರಲ್ಲಿ ಆನೆ ನಂತರ ಈಗ ಕರಡಿಗಳ ಕಾಟ

ಆನೆ ಕಾಟದ ನಡುವೆ ಕಾಫಿನಾಡು ಚಿಕ್ಕಮಗಳೂರಲ್ಲಿ ಕರಡಿಗಳ ಕಾಟ ಹೆಚ್ಚಾಗಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ರಸ್ತೆಯಲ್ಲಿ ಹೋಗುವಾಗ ಕರಡಿ ದಿಢೀರ್ ಪ್ರತ್ಯಕ್ಷವಾಗಿದೆ. ಕಾರು ಚಾಲಕನಿಗೆ ಅಡ್ಡ ನಿಂತ ಕರಡಿಯು ನಂತರ ಕಾರಿನ ಬೆಳಕಿನಲ್ಲಿ ಮೂರು ಕಿ.ಮೀವರೆಗೆ ಓಡಿದೆ.

ಕರಡಿಗಳು ರಾಜ್ಯ ಹೆದ್ದಾರಿಯಲ್ಲಿ ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಬೈಕ್ ಸವಾರರಿಗೆ ಪ್ರಾಣ ಭಯ ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ ಹೊನ್ನಳ್ಳ, ಮಲ್ಲಂದೂರು ಭಾಗದಲ್ಲಿ ಕರಡಿಗಳು ರಾತ್ರಿ ವೇಳೆ ರಸ್ತೆಗೆ ಬಂದು ನಿಲ್ಲುತ್ತಿವೆ.

ಮೈಸೂರಲ್ಲಿ ಪ್ರವಾಸಿಗರಿಗೆ ಹುಲಿ ದರ್ಶನ ಭಾಗ್ಯ

ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಯೊಂದು ದರ್ಶನ ನೀಡಿದೆ. ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ರೇಂಜ್‌ನಲ್ಲಿ ಸಫಾರಿಗೆ ತೆರಳಿದಾಗ ಹುಲಿ ಕಂಡಿದೆ. ಸಫಾರಿ ಮಾರ್ಗದ ಬದಿಯಲ್ಲಿರುವ ಕಟ್ಟೆಯಲ್ಲಿ ನೀರು ಕುಡಿದು ದಾಹ ನೀಗಿಸಿಕೊಂಡಿದೆ. ಹುಲಿಯನ್ನು ಸನಿಹದಿಂದ ಕಂಡು ಪ್ರವಾಸಿಗರು ಪುಳಕಿತರಾದರು. ಇತ್ತೀಚಿನ ದಿನಗಳಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಪದೇಪದೆ ಹುಲಿಗಳು ಕಾಣಿಸಿಕೊಳ್ಳುತ್ತಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version