Site icon Vistara News

Haveri News : ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ; ಯುವಕ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

Accident in bull taming competition Youth killed over 15 injured

ಹಾವೇರಿ: ಜಾನಪದ ಸಂಪ್ರದಾಯದ ಹಬ್ಬ ಎನ್ನಿಸಿರುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಹಾವೇರಿಯಲ್ಲಿ ನಡೆದ (Haveri News) ಈ ಸಾಹಸಮಯ ಕ್ರೀಡೆ ಆರಂಭದಲ್ಲೇ ಒಬ್ಬನನ್ನು ಬಲಿಪಡೆದಿದೆ. ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಯುವಕ ಅದೇ ಹೋರಿಯಿಂದ ಜೀವ ಕಳೆದುಕೊಂಡಿದ್ದಾನೆ.

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅರಳಿಕಟ್ಟಿ ಗ್ರಾಮದ ಮಂಜಪ್ಪ ಚನ್ನಪ್ಪನವರ (38) ಎಂಬಾತ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ. ಹೋರಿಯನ್ನು ಬೆದರಿಸುತ್ತಿದ್ದಂತೆ ಅದು ಒಂದು ಕಡೆ ಓಡಿ, ಮತ್ತೆ ವಾಪಸ್ ಬಂದು ಮಂಜಪ್ಪನನ್ನು ತಿವಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜಪ್ಪನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಈ ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರೆ, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಯುವಕ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಹೋರಿ ಬೆದರಿಸುವ ಹಬ್ಬವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಹಂಸಭಾವಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

ಹಸು ಹುಡುಕಲು ಹೋದ ವ್ಯಕ್ತಿಯನ್ನು ಅಟ್ಟಾಡಿಸಿ ಕಾಡುಕೋಣ ದಾಳಿ

ಚಿಕ್ಕಮಗಳೂರಿನಲ್ಲಿ ಕಾಡುಕೋಣ ಹಾವಳಿ (Bison Menace) ಮುಂದುವರಿದಿದೆ. ಹಸು ಹುಡುಕಲು ಹೋದಾಗ ವ್ಯಕ್ತಿಗೆ ಕಾಡುಕೋಣವು ದಾಳಿ (Bison Attack ) ಮಾಡಿದೆ. ಕೊಪ್ಪ ತಾಲೂಕಿನ ಅತ್ತಿಕುಡಿಗೆಯ ನೇರಳೆ ಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಭಾಕರ್‌ (45) ಕಾಡುಕೋಣ ತಿವಿತಕ್ಕೆ ಒಳಗಾದವರು.

ಪ್ರಭಾಕರ್‌ ಅವರನ್ನು ಓಡಿಸಿಕೊಂಡು ಬಂದು ಕಾಡುಕೋಣ ದಾಳಿ ಮಾಡಿದೆ. ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೆನ್ನು, ತೊಡೆ, ಹೊಟ್ಟೆಯ ಭಾಗಕ್ಕೆ ಕೋಣ ತಿವಿದಿದ್ದು, ಗಂಭೀರ ಗಾಯಗೊಂಡಿರುವ ಪ್ರಭಾಕರ್‌ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಮಂಗಳೂರಿಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: Road Accident : ಬೈಕ್‌ಗೆ ಕಾರು ಡಿಕ್ಕಿ; ವಾಟರ್‌ ಮ್ಯಾನ್‌ ಸಾವು

ರಸ್ತೆಯಲ್ಲಿ ಅಡ್ಡ ನಿಂತ ಕಾಡುಕೋಣ ಹಿಂಡು

ಈ ಹಿಂದೆ ಫೆ.16ರಂದು ಸುಮಾರು 15ಕ್ಕೂ ಅಧಿಕ ಕಾಡುಕೋಣಗಳು ರಸ್ತೆಯ ಪಕ್ಕದಲ್ಲಿ (Bison at Road Side) ನಿಂತು ಆತಂಕ ಮೂಡಿಸಿತ್ತು. ಚಿಕ್ಕಮಗಳೂರು ತಾಲೂಕಿನ (Chikkamagaluru News) ಬೆಟ್ಟದ ಮರಡಿ ಗ್ರಾಮದಲ್ಲಿ ಕಾಡು ಕೋಣಗಳ ಹಿಂಡು ರಸ್ತೆ ಪಕ್ಕದಲ್ಲಿ ಬಂದು ನಿಂತಿತ್ತು. ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು.

ಒಂದು ಕಡೆ ಕಾಡಾನೆಗಳ ಕಾಟದ ನಡುವೆ ಕಾಡೆಮ್ಮೆಗಳ ಕಾಟದಿಂದ ಜನರು ಕಂಗೆಡುವಂತಾಗಿತ್ತು. ಕಾಡಿನ ಭಾಗದಿಂದ ಇಳಿದು ಬಂದಿರುವ ಈ ಕಾಡುಕೋಣಗಳು ನಗರ ಪ್ರದೇಶದತ್ತ ಬರುತ್ತಿರುವುದರಿಂದ ಜನರಿಗೆ ಆತಂಕ ಹೆಚ್ಚಿಸಿತ್ತು. ಇದು ರಸ್ತೆಯಲ್ಲೇ ಸಾಗುವ ಅಪಾಯವಿರುವುದರಿಂದ ಯಾವ ಸಮಯದಲ್ಲಿ ಯಾರ ಮೇಲೆ ದಾಳಿ ಮಾಡುತ್ತೋ ಎಂಬ ಭಯದಲ್ಲಿ ಜನ ಇದ್ದರು. ಈ ಭಾಗದಲ್ಲಿ ಪದೇಪದೆ ಕಾಡು ಕೋಣಗಳ ದಂಡು ಪ್ರತ್ಯಕ್ಷವಾಗುತ್ತಿದ್ದರಿಂದ , ತೋಟದ ಕೆಲಸ ಹಾಗೂ ಇತರ ಕೆಲಸಗಳಿಗೂ ಹೋಗಲು ಜನರು ಭಯ ಪಡುವಂತಾಗಿತ್ತು.

ಹಿಂಡು ಹಿಂಡಾಗಿ ಬರುತ್ತಿರುವ ಕಾಡುಕೋಣಗಳನ್ನು ಓಡಿಸಲು ಪ್ರಯತ್ನ ಮಾಡಿದ ಸ್ಥಳೀಯರು ಅದರಲ್ಲಿ ಸಣ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದ್ದರು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಈ ಕಾಡುಕೋಣಗಳೇ ನೇರಳೆ ಕಟ್ಟೆ ಗ್ರಾಮಕ್ಕೂ ಬಂದಿರಬಹುದು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version