Site icon Vistara News

HD Kumaraswamy Fan : ಎಚ್‌ಡಿಕೆ ಸಿಎಂ ಆಗಲಿ ಎಂದು ಹರಕೆ ಹೊತ್ತು ಶಬರಿಮಲೆಗೆ ಯಾತ್ರೆ ಹೊರಟ ರೇವಣ್ಣ!

HD Kumaraswamy yatre

#image_title

ಚಾಮರಾಜನಗರ: ತಾವು ಗೌರವಿಸುವ, ಅಭಿಮಾನದಿಂದ ನೋಡುವ ನಾಯಕರು ದೊಡ್ಡ ಹುದ್ದೆಗೇರಲಿ ಎಂದು ಹಾರೈಸಿ ಅಭಿಮಾನಿಗಳು ಏನೇನೋ ಕಸರತ್ತು, ಪೂಜೆಗಳನ್ನು ಮಾಡುತ್ತಾರೆ. ಇಲ್ಲೊಬ್ಬ ಅಭಿಮಾನಿ (HD Kumaraswamy Fan) ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರು ಸಿಎಂ ಆಗಲಿ ಎಂದು ಶಬರಿಮಲೆಗೆ ಯಾತ್ರೆ ಹೊರಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಬಾಗಳಿ ನಿವಾಸಿಯಾಗಿರುವ ಬಾಗಳಿ ರೇವಣ್ಣ ಎಂಬ ಅಭಿಮಾನಿ ಎಚ್.ಡಿ. ಕುಮಾರಸ್ವಾಮಿ ಅವರ ಫೋಟೊ ಹೊತ್ತು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಜೆಡಿಎಸ್ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬಾಗಳಿ ರೇವಣ್ಣ ಅವರು ಇರುಮುಡಿ ಕಟ್ಟಿನ ಜತೆಗೆ ಕುಮಾರಸ್ವಾಮಿ ಅವರ ಫೋಟೊವನ್ನು ಕೂಡಾ ತಲೆಯ ಮೇಲೆ ಹೊತ್ತು ಬೆಟ್ಟ ಹತ್ತಿದ್ದಾರೆ.

ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ರೇವಣ್ಣ ಅವರು ತಲೆ ಮೇಲೆ ಎಚ್‌ಡಿ‌ಕೆ ಫೋಟೋ ಹೊತ್ತು ಶಬರಿಮಲೆಗೆ ತೆರಳಿದ್ದಲ್ಲದೆ, ಎಚ್‌ಡಿಕೆ ಸಿಎಂ ಆಗಲಿ ಎಂದು ಅಯ್ಯಪ್ಪನ ಸನ್ನಿಧಿಯವರೆಗೂ ಸಾಗಿ ಬೇಡಿಕೆ ಇಟ್ಟಿದ್ದಾರೆ. ಜೆಡಿಎಸ್‌ನ ವಿಷನ್123 ಯಶಸ್ವಿಯಾಗಬೇಕು, ಕುಮಾರಸ್ವಾಮಿ ಸಿಎಂ ಆಗಬೇಕು ಎನ್ನುವುದು ಅವರ ಹರಕೆ.

ಇದನ್ನೂ ಓದಿ : Pancharatna Rath Yatra: ನಾನು ಮುಖ್ಯಮಂತ್ರಿ ಆಗಿ ಬರ್ತೇನೆ, ನಿಮ್ಮೆಲ್ಲ ಕಷ್ಟ ಪರಿಹರಿಸ್ತೇನೆ ಎಂದ ಕುಮಾರಸ್ವಾಮಿ

Exit mobile version