Site icon Vistara News

Israel Palestine War: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಲು ಸಿದ್ಧತೆ, ಬಿಗಿ ಭದ್ರತೆ

Chinna swamy stadium Security

ಬೆಂಗಳೂರು: ಪಾಕಿಸ್ತಾನ- ಆಸ್ಟ್ರೇಲಿಯ (Pakistan- Australia match) ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ನಡೆಯಲಿರುವ ಕ್ರಿಕೆಟ್‌ ಪಂದ್ಯಾಟದ (world cup cricket match) ವೇಳೆ ಪ್ಯಾಲೆಸ್ತೀನ್‌ ಪರ (Israel Palestine War) ಘೋಷಣೆ ಕೂಗಲು, ಧ್ವಜ ಪ್ರದರ್ಶಿಸಲು ಕೆಲವು ಸಂಘಟನೆಗಳು ಮುಂದಾಗಿವೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ (intelligence) ದೊರೆತಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇಸ್ರೇಲ್- ಪ್ಯಾಲೆಸ್ತೀನ್‌ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್‌ ವಿರುದ್ಧ ಹಾಗೂ ಪ್ಯಾಲೆಸ್ತೀನ್‌ ಬಂಡುಕೋರರ ಪರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗಮನ ಸೆಳೆಯಲು ಹಲವು ವಿಧದ ಸಿದ್ಧತೆ ಹಲವು ಸಂಘಟನೆಗಳಿಂದ ನಡೆಯುತ್ತಿದೆ. ಸಾವಿರಾರು ಜನ ಸೇರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗುವುದು ಇವುಗಳಲ್ಲಿ ಒಂದಾಗಿದೆ.

ಅ.20ರಂದು ರಾಜಧಾನಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳ ಕ್ರಿಕೆಟ್ ಮ್ಯಾಚ್ ಇದೆ. ಈ ಸಂದರ್ಭದಲ್ಲಿ ಪ್ರೇಕ್ಷಕರ ಸೋಗಿನಲ್ಲಿ ಒಳನುಸುಳಿ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಲು ಹಲವರು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ. ಈಗಾಗಲೇ ರಾಜಧಾನಿಯ ಎಂಜಿ ರಸ್ತೆಯಲ್ಲಿ ಪಾಲೆಸ್ತೀನ್ ಪರ ಪ್ರತಿಭಟನೆ ನಡೆಸಲಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿ 25 ಜನರನ್ನು ಪ್ರಿವೆನ್ಷನ್ ಆಕ್ಟ್‌ನಡಿ ಕಬ್ಬನ್ ಪಾರ್ಕ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಪಂದ್ಯಾಟ ವೀಕ್ಷಿಸಲು ಇತರ ಹಲವು ದೇಶಗಳಿಂದಲೂ ವೀಕ್ಷಕರು ಆಗಮಿಸಲಿದ್ದಾರೆ. ಇದು ಬಂಡುಕೋರರ ಪರ ಸಹಾನುಭೂತಿ ಹೊಂದಿರುವವರಿಗೆ ಪ್ರಶಸ್ತ ಸಮಯವೆನಿಸಿದೆ. ಇದರ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಪೊಲೀಸರು, ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಟ್ಟುನಿಟ್ಟಾದ ತಪಾಸಣೆ, ಬ್ಯಾಗ್‌- ಕರವಸ್ತ್ರ- ಕಪ್ಪು ಧ್ವಜ ಇತ್ಯಾದಿಗಳನ್ನು ಒಳಗೆ ತರದಂತೆ ನಿಗಾ ತೆಗೆದುಕೊಳ್ಳಲಾಗುತ್ತಿದೆ.

ಈ ಹಿಂದೆ ಖಲಿಸ್ತಾನ್ ಉಗ್ರರು ಕೂಡ ವಿಶ್ವಕಪ್‌ ಕ್ರಿಕೆಟನ್ನು ʼವರ್ಡ್ ಟೆರರಿಝಂ ಕಪ್ʼ ಎಂದು ಕರೆದಿದ್ದರಲ್ಲದೆ, ಆಟದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಬೆದರಿಕೆ ಹಾಕಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಲು ಸಿದ್ಧತೆ ನಡೆಸಿದ್ದರು. ಅ.20ರ ಪಂದ್ಯಾಟ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಮೊದಲ ಮ್ಯಾಚ್ ಆಗಿದೆ. ಹೀಗಾಗಿ ಪೊಲೀಸರಿಂದ ಬಿಗಿ ಭದ್ರತೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Israel Palestine War: ಗಾಜಾ ಆಸ್ಪತ್ರೆ ಮೇಲೆ ರಾಕೆಟ್‌ ದಾಳಿಗೆ 500 ಜನ ಬಲಿ; ಉಗ್ರರೇ ಕೊಂದರೇ?

Exit mobile version