Site icon Vistara News

Gokarna Temple: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಸಮಿತಿಗೆ ಐಟಿ ನೋಟಿಸ್

Gokarna Mahabaleshwar Temple

ಕಾರವಾರ: ಹಣಕಾಸಿನ ವ್ಯವಹಾರದಲ್ಲಿ ವ್ಯತ್ಯಯ ಕಂಡುಬಂದ ಹಿನ್ನೆಲೆಯಲ್ಲಿ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಸಮಿತಿಗೆ (Gokarna Temple) ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, 1.38 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಆಡಳಿತ ಸಮಿತಿಗೆ ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ.

2015-16ನೇ ಸಾಲಿನಲ್ಲಿ ದೇವಸ್ಥಾನವು ಶ್ರೀರಾಮಚಂದ್ರಾಪುರ ಮಠದ ಆಡಳಿತದಲ್ಲಿದ್ದಾಗ ಹಣಕಾಸು ವ್ಯವಹಾರದಲ್ಲಿ ವ್ಯತ್ಯಯ ಕಂಡುಬಂದಿತ್ತು. ಹೀಗಾಗಿ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಬಿ.ಎನ್.ಶ್ರೀಕೃಷ್ಣ ನೇತೃತ್ವದ ದೇವಸ್ಥಾನ ಉಸ್ತುವಾರಿ ಸಮಿತಿ ಸೋಮವಾರ ಆನ್‌ಲೈನ್ ಸಭೆ ನಡೆಸಿದೆ. ಸಭೆಯಲ್ಲಿ ದಂಡದ ಮೊತ್ತದ 20ರಷ್ಟು ಹಣ ಕಟ್ಟಲು ಸಮಿತಿ ನಿರ್ಧರಿಸಿದೆ.

ದಂಡದ ಮೊತ್ತದಲ್ಲಿ 27.65 ಲಕ್ಷ ಹಣ ಕಟ್ಟಲು ನಿರ್ಧರಿಸಿರುವ ದೇವಸ್ಥಾನ ಸಮಿತಿ, ಉಳಿದ ಉಳಿದ 1.10 ಕೋಟಿ ರೂ. ಪಾವತಿಗೆ ತಡೆ ತರಲು ದೇವಸ್ಥಾನ ಸಮಿತಿ ಮುಂದಾಗಿದೆ.

ಇದನ್ನೂ ಓದಿ | Actor Upendra : ನಟ ಉಪೇಂದ್ರಗೆ ಹೈಕೋರ್ಟ್‌ ಬಿಗ್‌ ರಿಲೀಫ್‌, FIRಗೆ ಮಧ್ಯಂತರ ತಡೆ

ಮುರ್ಡೇಶ್ವರ ಕಡಲಿನಲ್ಲಿ ಈಜಲುಹೋದ ಒಬ್ಬ ನೀರುಪಾಲು, ಮತ್ತೊಬ್ಬ ಪಾರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ (Tourist place) ಮತ್ತು ಪುಣ್ಯ ಕ್ಷೇತ್ರವಾದ ಮುರ್ಡೇಶ್ವರ ಕಡಲ ತೀರದಲ್ಲಿ (Murdeshwara beach) ನೀರಿಗೆ ಇಳಿದ ಪ್ರವಾಸಿಗರಲ್ಲಿ ಒಬ್ಬರು ನೀರುಪಾಲಾಗಿದ್ದು (Tourist drowned), ಇನ್ನೊಬ್ಬರನ್ನು ರಕ್ಷಿಸಲಾಗಿದೆ. ಕೋಲಾರ ಮೂಲದ ಮಣಿತೇಜಾ (21) ಕಾಣೆಯಾಗಿದ್ದರೆ (Youth drowned), ಕೋಲಾರದ ಯಶ್(22) ಎಂಬವರನ್ನು ರಕ್ಷಿಸಲಾಗಿದೆ.

ಕೋಲಾರ ಮೂಲದ 22 ಮಂದಿ ಪ್ರವಾಸಿಗರು ಭಾನುವಾರ ಮುರ್ಡೇಶ್ವರಕ್ಕೆ ಬಂದಿದ್ದರು. ಎಲ್ಲರೂ ಸಮುದ್ರ ತೀರದಲ್ಲೇ ನೀರಾಟವಾಡುತ್ತಿದ್ದರೆ, ಇಬ್ಬರು ಸ್ವಲ್ಪ ದೂರ ನೀರಿನಲ್ಲಿ ಮುಂದೆ ಹೋಗಿದ್ದಾರೆ.

ಸಮುದ್ರಕ್ಕಿಳಿಯದಂತೆ ನಿರ್ಬಂಧ ಇದ್ದರೂ ಪ್ರವಾಸಿಗರು ನೀರಿಗೆ ಇಳಿದಿದ್ದರು. ಈ ನಡುವೆ, ಅವರಲ್ಲಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕೂಡಲೇ ಅಲ್ಲಿದ್ದ ರಕ್ಷಕರು ಅವರಿಬ್ಬರನ್ನು ರಕ್ಷಿಸಲು ಮುಂದಾದರು. ಆದರೆ ಒಬ್ಬ ಯಶ್‌ ಮಾತ್ರ ಅವರ ಕೈಗೆ ಸಿಕ್ಕಿದ್ದು, ಮಣಿತೇಜಾ ಸಿಕ್ಕಿರಲಿಲ್ಲ. ನಾಪತ್ತೆಯಾದ ಪ್ರವಾಸಿಗನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ಬಸ್-ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಸ್ಥಳದಲ್ಲೇ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಮಳೆಗಾಲದಲ್ಲಿ ಕಡಲಿನಲ್ಲಿ ಭಾರಿ ಪ್ರಕ್ಷುಬ್ಧತೆ ಇರುತ್ತದೆ ಎನ್ನುವ ಕಾರಣಕ್ಕಾಗಿ ಯಾರೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿತ್ತು. ಕೆಲವು ಸಮಯದ ಹಿಂದೆ ತೀರದ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ದೂರದ ಊರಿನಿಂದ ಜನರ ಬರುತ್ತಾರೆ. ತೀರಕ್ಕೆ ಹೋಗಲೂ ಬಿಡದಿರುವುದು ತಪ್ಪಾಗುತ್ತದೆ ಎಂಬ ಕಾರಣಕ್ಕೆ ನಿರ್ಬಂಧವನ್ನು ಸ್ವಲ್ಪ ಸಡಿಲಿಸಲಾಗಿತ್ತು. ತೀರಕ್ಕೆ ಹೋಗಬಹುದು, ನೀರಿನಲ್ಲಿ ದೂರ ಹೋಗುವಂತಿಲ್ಲ ಎಂದು ಸೂಚಿಸಲಾಗಿತ್ತು. ಆದರೆ, ಕೆಲವರು ಅಲ್ಲಿರುವ ಸೂಚನೆ, ಜೀವರಕ್ಷಕರ ಮನವಿಗೂ ಕಿವಿಗೊಡದೆ ಮುನ್ನುಗ್ಗುವ ಘಟನೆಗಳು ಅಲ್ಲಿ ನಡೆಯುತ್ತಿರುತ್ತಿವೆ.

Exit mobile version