Site icon Vistara News

Karnataka Election 2023: ಅಮಿತ್ ಶಾ ಸೇಬಿನ ಹಾರಕ್ಕೆ ಮುಗಿಬಿದ್ದು ಕೈ ಮುರಿದುಕೊಂಡ ಕಾರ್ಯಕರ್ತ

#image_title

ಚಿಕ್ಕಬಳ್ಳಾಪುರ: ಕೇಂದ್ರ ಗೃಹ ಸಚಿವ ಅಮಿತ್‌ ಶಾಗಾಗಿ (Amit Shah) ಸಾವಿರ ಕೆ.ಜಿಯ ಸೇಬಿನ ಹಾರವನ್ನು ತರಿಸಲಾಗಿತ್ತು. ಆಪಲ್ ಹಣ್ಣಿಗಾಗಿ ಮುಗಿಬಿದ್ದ ಕಾರ್ಯಕರ್ತನೊಬ್ಬ ತನ್ನ‌ ಕೈಯನ್ನೇ ಮುರಿದುಕೊಂಡಿದ್ದಾನೆ. ಮಂಚೇನಹಳ್ಳಿ ತಾಲೂಕಿನ ಹೆಗ್ಗೇನಹಳ್ಳಿ ಗ್ರಾಮದ ವ್ಯಕ್ತಿ ಕೈ ಮುರಿದುಕೊಂಡರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ಸುಧಾಕರ್ ರೋಡ್ ಶೋ‌ ಆಯೋಜಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾಗಾಗಿ ಸೇಬಿನ ಹಾರವೊಂದನ್ನು ಮಾಡಿಸಲಾಗಿತ್ತು. ಈ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳನ್ನು ಚಿಕಿತ್ಸೆಗಾಗಿ ನಗರದ ಜೀವನ್‌ ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ: Murder Case: ಅಸೆಂಬ್ಲಿ ಎಲೆಕ್ಷನ್‌ ಟಿಕೆಟ್‌ ಕೇಳಿದ್ದಕ್ಕೆ ರೌಡಿಶೀಟರ್‌ ಕಗ್ಗೊಲೆ?; ಅಸಾದುದ್ದೀನ್ ಓವೈಸಿ ಜತೆ ಮಾತಾಡಿದ ಆಡಿಯೊ ವೈರಲ್‌

ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳ ಪರವಾಗಿ ಕೇಂದ್ರ ನಾಯಕರು ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಮತಬೇಟೆಗಾಗಿ ಕೊನೆ ಹಂತದ ಕಸರತ್ತು ಕೈಗೊಂಡಿದ್ದಾರೆ. ಪಕ್ಷಗಳ ಕಾರ್ಯಕರ್ತರು ಅತ್ಯುತ್ಸಾಹದ ಭರದಲ್ಲಿ ಕೈ ಕಾಲು ಮುರಿದುಕೊಳ್ಳುತ್ತಿದ್ದಾರೆ.

Exit mobile version